• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೊನಾ ಲಸಿಕೆಯಿಂದಲೇ ವ್ಯಕ್ತಿಯ ಸಾವು ಸಂಭವಿಸಿದೆ: ಮೊದಲ ಬಾರಿಗೆ ಒಪ್ಪಿಕೊಂಡ ಕೇಂದ್ರ ಸರ್ಕಾರ

ಕೊರೊನಾ ಲಸಿಕೆಯಿಂದಲೇ ವ್ಯಕ್ತಿಯ ಸಾವು ಸಂಭವಿಸಿದೆ: ಮೊದಲ ಬಾರಿಗೆ ಒಪ್ಪಿಕೊಂಡ ಕೇಂದ್ರ ಸರ್ಕಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ಕಾರ ಇದೇ ಮೊದಲ ಬಾರಿಗೆ ಲಸಿಕೆಯ ಪರಿಣಾಮದಿಂದ 68 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಒಪ್ಪಿಕೊಂಡಿದೆ, 

  • Share this:

ನವದೆಹಲಿ (ಜೂ. 15):  ಕೋವಿಡ್​ ಲಸಿಕೆ ವಿತರಣೆ ದೇಶದಲ್ಲಿ ಆರಂಭಿಸಿದ ಬಳಿಕ ಲಸಿಕೆ ಪಡೆದ ಅನೇಕ ಮಂದಿ ವಿವಿಧ ಕಾರಣಗಳಿಂದ ಸಾವನ್ನಪ್ಪಿದರು. ಅಲ್ಲದೇ, ಲಸಿಕೆ ಪಡೆದ ಕಾರಣದಿಂದಲೇ  ಕೆಲವರು ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಆದರೆ, ಸರ್ಕಾರ ಮಾತ್ರ ಅವರ  ಸಾವಿಗೆ ಲಸಿಕೆಯೇ ಕಾರಣ ಎಂಬ ವಾದವನ್ನು  ತಳ್ಳಿ ಹಾಕಿತ್ತು. ಅಲ್ಲದೇ, ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂಬ ಬಗ್ಗೆ ಭರವಸೆ ಕೂಡ ನೀಡಿತ್ತು. ಇದರ ಜೊತೆ ಲಸಿಕೆಯ ಪರಿಣಾಮಕಾರಿತ್ವ ಹಾಗೂ ಅಡ್ಡ ಪರಿಣಾಮದ ಕುರಿತು ಪರೀಕ್ಷೆ ನಡೆಸಲು ಮುಂದಾಗಿತ್ತು. ಈ ಬಗ್ಗೆ ಅಧ್ಯಯನ ನಡೆಸಿದ ಸರ್ಕಾರದ ಸಮಿತಿ, ಇದೇ ಮೊದಲ ಬಾರಿಗೆ ಲಸಿಕೆಯ ಪರಿಣಾಮದಿಂದ 68 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಒಪ್ಪಿಕೊಂಡಿದೆ.


ಕೋವಿಡ್​ ಲಸಿಕೆ ಪಡೆದ ಬಳಿಕ ದೇಶದಲ್ಲಿ ಇದುವರೆಗೂ ಸಾವನ್ನಪ್ಪಿದವರು ಕೇವಲ ಒಬ್ಬ ವ್ಯಕ್ತಿ ಮಾತ್ರ ಎಂದು ಸರ್ಕಾರದ ಸಮಿತಿ ದೃಢಪಡಿಸಿದೆ. ಲಸಿಕೆ ಅಡ್ಡಪರಿಣಾಮ ಕುರಿತು ಅಧ್ಯಯನ ನಡೆಸಿದ ಸರ್ಕಾರದ ಸಮಿತಿ ಈ ವರದಿ ಬಹಿರಂಗ ಪಡಿಸಿದೆ. ಲಸಿಕೆ ಪಡೆದ ಬಳಿಕ ಉಂಟಾಗುವ ಅಲರ್ಜಿಯಿಂದಾಗಿ 68 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಲಸಿಕೆ ಪಡೆದ ಕಾರಣವೇ ಇವರು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟ ಪಡಿಸಿದೆ. ಮಾರ್ಚ್​ 8 ರಂದು ಇವರು ​ ಲಸಿಕೆ ಪಡೆದಿದ್ದ ಇವರು ಮಾರ್ಚ್​ 31ರಂದು ಸಾವನ್ನಪ್ಪಿದರು ಎಂದು ಸಮಿತಿ ತಿಳಿಸಿದೆ. ​ಲಸಿಕೆ ಪ್ರತಿಕೂಲ ಪರಿಣಾಮ ಕುರಿತು ಎಇಎಫ್​ಐ ಸಮಿತಿ ಅಧ್ಯಯನ ನಡೆಸಿತು. ಈ ಸಮಿತಿಯಲ್ಲಿ ಕೋವಿಡ್​ ಲಸಿಕೆ ಪಡೆದ ಬಳಿಕ ಗಂಭೀರ ಪರಿಣಾಮ ಬೀರಿದ 31 ಪ್ರಕರಣಗಳನ್ನು ಅಧ್ಯಯನ ನಡೆಸಲಾಯಿತು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮಾತ್ರ ಅನಾಫಿಲ್ಯಾಕ್ಸಿಸ್​ನಿಂದಾಗಿ ಸಾವನ್ನಪ್ಪಿದ್ದಾರೆ ಎಂಬುದು ದೃಢವಾಗಿದೆ.


ಈ ಕುರಿತು ಮಾತನಾಡಿರುವ ಎಇಎಫ್​ಐ ಮುಖ್ಯಸ್ಥ ಡಾ. ಎನ್​ಕೆ ಆರೋರಾ, 68 ವರ್ಷದ ವ್ಯಕ್ತಿ ಸಾವಿಗೆ ಕೋವಿಡ್​ ಲಸಿಕೆಯೇ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಈ ಕುರಿತು ಯಾವುದೇ ಹೇಳಿಕೆ ನೀಡಲು ಅವರು ನಿರಾಕರಿಸಿದ್ದಾರೆ.


68 ವರ್ಷದ ವ್ಯಕ್ತಿ 8 ಮಾರ್ಚ್​ 2021ರಂದು ಕೋವಿಡ್​ ಲಸಿಕೆ ಪಡೆದಿದ್ದರು. ಈ ವೇಳೆ ಅವರು ಅನಾಫಿಲ್ಯಾಕ್ಸಿಸ್​ ನಿಂದಾಗಿ ಅಂದರೆ, ಅಲರ್ಜಿ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ. ಉಳಿದ ಪ್ರಕರಣ ಸೇರಿದಂತೆ ಸಂಪೂರ್ಣ ತನಿಖೆಯ ನಂತರ ಕೂಡ ಲಸಿಕೆ ಪರಿಣಾಮವಾಗಿ ಸಾವನ್ನಪ್ಪಿದವರು ಒಬ್ಬರೇ ಎಂಬುದು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಸಿಎನ್​ಎನ್​ ನ್ಯೂಸ್​ 18ಗೆ ತಿಳಿಸಿದ್ದಾರೆ.


ಇದನ್ನು ಓದಿ: ಕೊರೋನಾ ಲಸಿಕೆ ಹಾಕಿಸಿಕೊಂಡ ನಟ ಶ್ರೀಮುರಳಿ: ವ್ಯಾಕ್ಸಿನ್​ ತೆಗೆದುಕೊಳ್ಳುವಂತೆ ಅರಿವು ಮೂಡಿಸುತ್ತಿರುವ ಸ್ಟಾರ್​ಗಳು..!


ಇನ್ನು ಉಳಿದ 31 ಸಾವಿನಲ್ಲಿ 18 ಮಂದಿ ಸಾವು ಲಸಿಕೆಯೊಂದಿಗೆ ಯಾವುದೇ ಸಂಬಂದ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಲಸಿಕೆ ಅವರ ಸಾವಿಗೆ ಕಾಕತಾಳಿಯವಾಗಿದೆ. ಅವರ ಸಾವಿಗೆ ಇತರೆ ಕಾರಣ ಇದ್ದು, ಇದು ವಾಕ್ಸಿನೇಷನ್​ನಿಂದ ಸಂಭವಿಸಿಲ್ಲ. ಇನ್ನು ಏಳು ಸಾವುಗಳನ್ನು ಅನಿರ್ಧಿಷ್ಟ ಎಂದು ವರ್ಗೀಕರಿಸಲಾಗಿದ್ದು, ಇನ್ನುಳಿದ ಎರಡು ಪ್ರಕರಣವನ್ನು ವರ್ಗೀಕರಣ ಮಾಡಿಲ್ಲ. ಈ ವರ್ಗೀಕರಿಸಲಾಗದ ಸಾವಿನ ತನಿಖೆ ಮಾಡಲಾಗಿದೆ. ಆದರೂ ಈ ಸಾವಿಗೆ ನಿರ್ಣಾಯಕ ಮಾಹಿತಿ ಸಿಕ್ಕಿಲ್ಲ.


ಲಸಿಕೆ ಪಡೆದ ಬಳಿಕ ಉಂಟಾಗುವ ಅಡ್ಡ ಪರಿಣಾಮಗಳಿಂದ  ಸಾವನ್ನಪ್ಪುವವರ ಸಂಖ್ಯೆ 0.01ಕ್ಕಿಂತ ಕಡಿಮೆಯೇ ಎಂದು ಕೂಡ ಸಮಿತಿ ತಿಳಿಸಿದೆ. ಲಸಿಕೆ ಮೊದಲ ವಿತರಣೆ ಆರಂಭವಾದಾಗಿನಿಂದ ಅಂದರೆ ಜೂನ್​ 16ರಿಂದ ಜೂನ್​ 7ರವರೆಗೆ ಅಂಕಿ ಅಂಶಗಳ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯದ ಎಇಎಫ್​ಐ ಈ ವರದಿ ತಯಾರಿಸಿದೆ.

top videos
    First published: