ತುಮಕೂರು(ಆ.30): ತುಮಕೂರು ಗ್ರಾಮಾಂತರ ಕ್ಷೇತ್ರದಂತೆ ತುರುವೇಕೆರೆ ಕ್ಷೇತ್ರದಲ್ಲೂ ಹಾಲಿ ಮಾತ್ತು ಮಾಜಿ ಶಾಸಕರುಗಳ ನಡುವೆ ಕ್ಷುಲ್ಲಕ ಕಾರಣವೊಂದಕ್ಕೆ ಫೈಟ್ ಶುರುವಾಗಿದೆ. ಇದರ ಪರಿಣಾಮ ಇಡೀ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ನಡುವೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿ ಸೋಮವಾರ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ದವಾದ ಜೆಡಿಎಸ್ಗೆ ಶಾಕ್ ಕೊಟ್ಟಿದೆ. ಆದರೂ ಪ್ರತಿಭಟನೆ ಮಾಡಿಯೇ ತೀರುತ್ತೆವೆ ಎಂಬ ಜೆಡಿಎಸ್ ನಾಯಕರ ಹೇಳಿಕೆಯಿಂದ ಪರಿಸ್ಥಿತಿ ಇನ್ನಷ್ಟು ವಿಷಮವಾಗುವ ಸಾಧ್ಯತೆ ಇದೆ.
ತುರುವೇಕೆರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಮಸಾಲಾ ಜಯರಾಮ್ ಹಾಗೂ ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪರ ನಡುವೆ ರಾಜಕೀಯ ಬೃಹನ್ನಾಟಕ ನಡೆಯುತಿದೆ. ಕ್ಷುಲ್ಲಕ ಕಾರಣವೊಂದನ್ನು ಇಟ್ಟುಕೊಂಡು ಇಬ್ಬರು ನಾಯಕರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ. ತುರುವೇಕೆರೆಯ ಗುಡ್ಡೇನಹಳ್ಳಿ ಬಳಿ ಒತ್ತುವರಿ ಜಮೀನೊಂದರಲ್ಲಿ ಬೆಳೆದಿದ್ದ ತೆಂಗಿನ ಸಸಿಗಳನ್ನ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತೆರವುಗೊಳಿಸಿದ್ದು, ಹಾಲಿ ಮಾಜಿಗಳ ಕಚ್ಚಾಟಕ್ಕೆ ನೇರ ಕಾರಣವಾಗಿದೆ.
ಅಕ್ರಮವಾಗಿ ಬೆಳೆದಿದ್ದ ಈ ತೋಟ ಜೆಡಿಎಸ್ ಕಾರ್ಯಕರ್ತರದ್ದಾಗಿದ್ದು, ಬಿಜೆಪಿ ಶಾಸಕ ಮಸಾಲಾ ಜಯರಾಮ್ ಆಜ್ಞೆಯಂತೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಅನ್ನೋದು ಜೆಡಿಎಸ್ ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪರ ಆರೋಪ. ಶಾಸಕರ ಮೇಲೆ ಆರೋಪ ಹೊರಿಸಿದ ಜೆಡಿಎಸ್ ಮುಖಂಡರು ಕೊಲೆ ಗಡುಕ ಶಾಸಕ ಎಂದು ಪ್ರತಿಭಟನೆಯ ಸಂಕೇತವಾಗಿ ಫ್ಲೆಕ್ಸ್ ಹಾಕಿದ್ರು. ಇದು ಬಿಜೆಪಿ ಅವರ ಕೆಂಗಣ್ಣಿಗೆ ಗುರಿಯಾಗಿತ್ತು.
ಇನ್ನು, ತಕ್ಷಣ ಪೊಲೀಸರು ಕೊಲೆ ಗಡುಕ ಎಂಬ ಪದ ತೆರವುಗೊಳಿಸಿ ಫ್ಲೆಕ್ಸ್ ಹಾಗೇ ಉಳಿಸಿದ್ದರು. ಬಳಿಕ ಬಿಜೆಪಿ ಕಾರ್ಯಕರ್ತರು ಎಲ್ಲಾ ಫ್ಲೆಕ್ಸ್ಗಳನ್ನ ತೆರವುಗೊಳಿಸಿದರು. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ದ್ವೇಷಕ್ಕೆಕಾರಣವಾಯ್ತು. ಬಿಜೆಪಿಯವರ ಧೋರಣೆ ಖಂಡಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ಮಾಡಲು ಜೆಡಿಎಸ್ ಸಿದ್ದವಾಗಿದೆ.
ಇದನ್ನೂ ಓದಿ: Gali Janardhana Reddy: ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿಗೆ ಕೊರೋನಾ ಪಾಸಿಟಿವ್
ಜಿಲ್ಲಾಡಳಿತದ ಈ ಆದೇಶ ಜೆಡಿಎಸ್ನವರಿಗೆ ಶಾಕ್ ಕೊಟ್ಟಂತಾಗಿದೆ. 144 ಸೆಕ್ಷನ್ ಜಾರಿ ಇದ್ದರೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಜೆಡಿಎಸ್ ಮಾಜಿ ಶಾಸಕ ಕೃಷ್ಣಪ್ಪ ಗುಡುಗಿದ್ದಾರೆ . ಹಾಗಾಗಿ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 500 ಜನ ಪೊಲೀಸರು, 30 ಪಿಎಸ್ ಐ ,2 ಡಿಎಸ್ಪಿಗಳನ್ನು ಸ್ಥಳದಲ್ಲಿ ನಿಯೋಜಿಸಿ ಕಣ್ಣಿಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ