ನವದೆಹಲಿ: ಪತಂಜಲಿ ಸಂಸ್ಥೆಯ ಕೊರೋನಿಲ್ ಕಿಟ್ ಕೋವಿಡ್-19 ಗುಣಪಡಿಸುತ್ತದೆ ಎಂದು ತಪ್ಪು ಮಾಹಿತಿ ನೀಡಿದ ಯೋಗ ಗುರು ಬಾಬಾ ರಾಮ್ದೇವ್ಗೆ ದೆಹಲಿ ಹೈಕೋರ್ಟ್ ಗುರುವಾರ ಸಮನ್ಸ್ ನೀಡಿದೆ. ರಾಮ್ದೇವ್ ಅವರು ತಮ್ಮ ಸಂಸ್ಥೆಯ ಕೊರೊನಿಲ್ ಕಿಟ್ ಬಗ್ಗೆ ಜನರಿಗೆ ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ವೈದ್ಯಕೀಯ ಸಂಘ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಜುಲೈ 13 ಕ್ಕೆ ಪ್ರಕರಣದ ವಿಚಾರಣೆಯ ಮುಂದಿನ ದಿನಾಂಕದವರೆಗೆ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಬಾರದು ಮತ್ತು ಮೊಕದ್ದಮೆಗೆ ಸ್ಪಂದಿಸಬೇಡಿ ಎಂದು ಹೈಕೋರ್ಟ್ ಮೌಖಿಕವಾಗಿ ರಾಮದೇವ್ ಅವರಿಗೆ ಸೂಚಿಸಿದೆ.
ಕೋವಿಡ್ -19 ಗೆ ಚಿಕಿತ್ಸೆ ಎಂದು ಹೇಳಲಾದ ಪತಂಜಲಿಯ ಕೊರೊನಿಲ್ ಟ್ಯಾಬ್ಲೆಟ್ ಬಗ್ಗೆ ಸುಳ್ಳು ಮಾಹಿತಿ ಹರಡದಂತೆ ಬಾಬಾ ರಾಮ್ದೇವ್ ಅವರಿಗೆ ನಿರ್ದೇಶನ ನೀಡಬೇಕು ಎಂದು ದೆಹಲಿ ವೈದ್ಯಕೀಯ ಸಂಘ ಮನವಿ ಮಾಡಿತ್ತು.
ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ಸಿ ಹರಿಶಂಕರ್ ಅವರು ಬಾಬಾ ರಾಮದೇವ್ ಅವರ ಅಭಿಪ್ರಾಯಗಳನ್ನು ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಒಳಗೊಂಡಿದೆ ಮತ್ತು ಅಭಿವ್ಯಕ್ತಿ ಸಾರ್ವಜನಿಕ ಅಭಿಪ್ರಾಯದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು. “ಜನರಿಗೆ ವಾಕ್ ಸ್ವಾತಂತ್ರ್ಯವಿಲ್ಲವೇ? ಹೋಮಿಯೋಪತಿ ನಕಲಿ ಎಂದು ನಾನು ಭಾವಿಸಿದರೆ, ಹೋಮಿಯೋಪತಿ ವೈದ್ಯರು ನನ್ನ ವಿರುದ್ಧ ಮೊಕದ್ದಮೆ ಹೂಡಬೇಕೇ? ” ಎಂದು ಅವರು ಪ್ರಶ್ನಿಸಿದರು. ಆದ್ದರಿಂದ, ಮೊಕದ್ದಮೆ ಹೂಡುವುದಕ್ಕಿಂತ ಮಾರಕ ವೈರಸ್ಗೆ ಪರಿಹಾರವನ್ನು ಕಂಡು ಹಿಡಿಯಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡಿ ಎಂದು ದೆಹಲಿ ವೈದ್ಯಕೀಯ ಸಂಘಕ್ಕೆ ನ್ಯಾಯಮೂರ್ತಿ ಹೇಳಿದರು.
ಇದನ್ನು ಓದಿ: Karnataka Lockdown Extension: ಕರ್ನಾಟಕದಲ್ಲಿ ಜೂನ್ 14ರವರೆಗೆ ಲಾಕ್ಡೌನ್ ವಿಸ್ತರಣೆ; ಸಂಜೆ ಘೋಷಿಸಲಿರುವ ಸಿಎಂ
ದೆಹಲಿ ವೈದ್ಯಕೀಯ ಸಂಘವನ್ನು ಪ್ರತಿನಿಧಿಸುವ ವಕೀಲ ರಾಜೀವ್ ದತ್ತಾ ಅವರು ಬಾಬಾ ರಾಮ್ದೇವ್ ಅವರ ಸುಳ್ಳು ಹೇಳಿಕೆಗಳಿಂದಾಗಿ, ಜನರು ಲಸಿಕೆ ಪಡೆಯಲು ನಿರುತ್ಸಾಹ ತೋರಿಸಿದರು. ಇದು ಚುಚ್ಚುಮದ್ದಿನ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತದೆ ಮತ್ತು ಜೀವಗಳಿಗೆ ನೋವುಂಟು ಮಾಡುತ್ತದೆ ಎಂದು ವಾದಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ