ಬೆಂಗಳೂರು (ಏ. 8): 21 ದಿನಗಳ ಕಾಲ ಲಾಕ್ಡೌನ್ಗೆ ಕರೆನೀಡಿರುವ ಕೇಂದ್ರ ಸರ್ಕಾರದ ಆದೇಶದಂತೆ ಕರ್ನಾಟಕದಲ್ಲೂ ಲಾಕ್ಡೌನ್ ಘೋಷಿಸಲಾಗಿತ್ತು. ಆದರೆ, ಬೆಂಗಳೂರಿನ ಶಿವಾಜಿನಗರದಲ್ಲಿ ಮಾತ್ರ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಲಾಕ್ಡೌನ್ಗೆ ಕಿಮ್ಮತ್ತಿನ ಬೆಲೆಯೂ ನೀಡದೆ ಜನರು ಓಡಾಡುತ್ತಿದ್ದರು. ಕೊನೆಗೂ ಈ ಶಿವಾಜಿನಗರವನ್ನು ಲಾಕ್ಡೌನ್ ಮಾಡುವಲ್ಲಿ ಈಗ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಮೂಲಕ ಪೊಲೀಸರು ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಶಿವಾಜಿನಗರದ ಚಿತ್ರಣವನ್ನೇ ಬದಲಿಸಿದ್ದಾರೆ. ಶಿವಾಜಿನಗರವನ್ನು ಇಂದಿನಿಂದ ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದೆ. ಇಡೀ ಬೆಂಗಳೂರೇ ಲಾಕ್ಡೌನ್ ಆಗಿದ್ದರೂ ಶಿವಾಜಿನಗರದ ಜನ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇಲ್ಲಿ ಹಗಲು-ರಾತ್ರಿ ಜನ ಸಂಚಾರ ನಡೆದೇ ಇತ್ತು. ಸುರಕ್ಷತಾ ದೃಷ್ಟಿಯಿಂದ ಮನೆಯೊಳಗೆ ಇರುವಂತೆ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು ಹೇಳಿದರೂ ಆ ಬಗ್ಗೆ ಇಲ್ಲಿನ ಜನ ತಲೆಕೆಡಿಸಿಕೊಂಡಿರಲಿಲ್ಲ.
ಇದನ್ನೂ ಓದಿ: ಕಟ್ಟಡ ಕಾರ್ಮಿಕರು ಹತಾಶರಾಗಬೇಡಿ ನಿಮ್ಮ ನೆರವಿಗೆ ಸರ್ಕಾರ ಇದೆ; ಸಿಎಂ ಬಿಎಸ್ವೈ ಭರವಸೆ
ಹೀಗಾಗಿ, ಮೂರು ದಿನಗಳ ಹಿಂದಷ್ಟೇ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮತ್ತು ಡಿಸಿಪಿ ಶರಣಪ್ಪ ಮುಸ್ಲಿಂ ಧರ್ಮಗುರುಗಳ ಜೊತೆ ಸಭೆ ನಡೆಸಿದ್ದರು. ಲಾಕ್ಡೌನ್ ನಿಯಮ ಪಾಲಿಸುವಂತೆ ಜನರಿಗೆ ಕರೆ ಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಧರ್ಮಗುರುಗಳು ತಮ್ಮ ಸಮುದಾಯದ ಜನರಿಗೆ ಹೇಳಿದ ನಂತರ ನಿನ್ನೆಯಿಂದ ಶಿವಾಜಿನಗರ ಸಂಪೂರ್ಣ ಲಾಕ್ಡೌನ್ ಆಗಿದೆ. ಜನರಿಂದ ತುಂಬಿರುತ್ತಿದ್ದ ಶಿವಾಜಿನಗರ ಈಗ ಹೇಗಾಗಿದೆ ಎಂಬುದರ ಡ್ರೋನ್ ಕ್ಯಾಮೆರಾದ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: 1,000ಕ್ಕೂ ಅಧಿಕ ಕೊರೋನಾ ಕೇಸ್ ಹೊಂದಿದ ಮೊದಲ ರಾಜ್ಯವೆಂಬ ಕುಖ್ಯಾತಿ ಪಡೆದ ಮಹಾರಾಷ್ಟ್ರ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ