ಬೆಂಗಳೂರು (ಏ.05) : ಕೊರೋನಾ ವೈರಸ್ ನಿಂದ ಜನ ಸಾಮಾನ್ಯರು ತೀವ್ರ ತೊಂದರೆ ಪಡುತ್ತಿದ್ದಾರೆ. ಇದನ್ನು ಮನಗಂಡಿರುವ ಹಾಪ್ ಕಾಮ್ಸ್ ನಿಂದ ಬೆಂಗಳೂರಿನ ಅಪಾರ್ಟ್ಮೆಂಟ್ಗಳಿಗೆ ಇಂದಿನಿಂದ ನೇರವಾಗಿ ಹಣ್ಣುಗಳನ್ನು ಸರಬರಾಜು ಮಾಡಲು ಮುಂದಾಗಿದೆ.
ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಸಿಗದಂತಾಗಿ ಮಾರಾಟವಾಗದೆ ಹೊಲದಲ್ಲಿ ಹಾಳಾಗುತ್ತಿರುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತ ನಿರ್ಧಾರ ತೆಗೆದುಕೊಳ್ಳಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.
ಈ ಬಗ್ಗೆ ಬಿಬಿಎಂಪಿಯಲ್ಲಿ ಅಪಾರ್ಟ್ಮೆಂಟ್ ಅಸೋಸಿಯೇಶನ್ ಜೊತೆ ನಿನ್ನೆ ತೋಟಗಾರಿಕಾ ಸಚಿವ ನಾರಾಯಣ ಗೌಡ ವಿಡಿಯೋ ಸಂವಾದ ನಡೆಸಿದ್ದರು. ಹಾಪ್ ಕಾಮ್ಸ್ ಮೂಲಕ ಬೆಂಗಳೂರಿನಲ್ಲಿರುವ ಸುಮಾರು 720 ಅಪಾರ್ಟ್ಮೆಂಟ್ಗಳಿಗೆ ರೈತರ ಉತ್ಪನ್ನಗಳನ್ನು ನೇರವಾಗಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದರು.
ಇದನ್ನೂ ಓದಿ :
ಲಾಕ್ ಡೌನ್ ಉಲ್ಲಂಘಿಸಿದವರಿಗೆ ಯೋಗ ಶಿಕ್ಷೆ - ಮೇಣದ ಬತ್ತಿ ಕೊಟ್ಟು ನಾಳೆ ಬೆಳಗುವಂತೆ ಸೂಚನೆ
ಸಚಿವರ ಸೂಚನೆಯಂತೆ ರವಿವಾರದಿಂದ ಎಪ್ರಿಲ್ 5 ರಿಂದ ಅಪಾರ್ಟ್ಮೆಂಟ್ಗಳಿಗೆ ಹಣ್ಣುಗಳನ್ನು ನಿಗದಿತ ದರದಲ್ಲಿ ಸರಬರಾಜು ಮಾಡಲು ಹಾಪ್ ಕಾಮ್ಸ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಲಾಲ್ಬಾಬ್ ನಲ್ಲಿರುವ ಹಾಪ್ ಕಾಮ್ಸ್ ಮುಖ್ಯ ಕಚೇರಿಯಲ್ಲಿ ತೋಟಗಾರಿಕೆ ಸಚಿವ ನಾರಾಯಣಗೌಡ ಚಾಲನೆ ನೀಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ