• ಹೋಂ
  • »
  • ನ್ಯೂಸ್
  • »
  • Corona
  • »
  • ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನಾ ಕಡಿಮೆಯಾಗಿದೆ; ಸಿಎಂ ಬಿಎಸ್ ಯಡಿಯೂರಪ್ಪ

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನಾ ಕಡಿಮೆಯಾಗಿದೆ; ಸಿಎಂ ಬಿಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

Karnataka Coronavirus Updates: ನಾವು ಹೇಳಿರುವಷ್ಟು ಬೆಡ್ ಗಳನ್ನು ಮೀಸಲಿಡಬೇಕು. ನಿಮ್ಮ ಏನೇ ಸಮಸ್ಯೆಗಳು ಇದ್ದರೂ ಅದನ್ನು ತಿಳಿಸಿ. ನಮ್ಮ‌ ಸಚಿವರ ಜೊತೆ ಸಮಸ್ಯೆ ಬಗ್ಗೆ ತಿಳಿಸಿ. ಆ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೇವೆ. ಆದರೆ ಕೋವಿಡ್ ತಡೆಗೆ ಸಂಪೂರ್ಣವಾದ ಸಹಕಾರ ಕೊಡಬೇಕು ಎಂದು ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಮನವಿ ಮಾಡಿದರು.

ಮುಂದೆ ಓದಿ ...
  • Share this:

    ಬೆಂಗಳೂರು: ಕೋವಿಡ್ ನಿಯಂತ್ರಣ ಮಾಡುವಲ್ಲಿ ಕರ್ನಾಟಕ ಸರ್ಕಾರ ಮುಂದಿದೆ. ಬೆಂಗಳೂರಲ್ಲಿ ಬೇರೆ ರಾಜ್ಯಗಳ ರಾಜಧಾನಿಗಳಿಗಿಂತ ಕೊರೋನಾ ಕಡಿಮೆ ಆಗಿದೆ. ಸರ್ಕಾರದ ಪರಿಶ್ರಮದಿಂದ ಕೋವಿಡ್ ಕಡಿಮೆಯಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಂಕಿ- ಅಂಶಗಳ ಸಮೇತ ವಿವರಿಸಿದರು.


    ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರ ಜೊತೆ ಸಭೆ ಬಳಿಕ ಮಾತನಾಡಿದ ಸಿಎಂ ಬಿಎಸ್​ವೈ, ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಮುಂಬೈನಲ್ಲಿ 74,252 ಜನ ಕೊರೋನಾ ಸೋಂಕಿತರು ಇದ್ದಾರೆ. ಇದರಲ್ಲಿ 42,329 ಜನ ಗುಣಮುಖರಾಗಿದ್ದರೆ, 4284 ಸಾವಾಗಿದೆ‌. ನವದೆಹಲಿಯಲ್ಲಿ 80,188 ಜನ ಸೋಂಕಿತರಿದ್ದಾರೆ. ಗುಣಮುಖರಾದವರು 49,301, ಸತ್ತವರ ಸಂಖ್ಯೆ 2558. ಚೆನ್ನೈನಲ್ಲಿ 51,699 ಸೋಂಕಿತರು ಇದ್ದಾರೆ. 31,045 ಗುಣಮುಖರಾಗಿದ್ದಾರೆ. 733 ಮೃತಪಟ್ಟಿದ್ದಾರೆ. ಕೊಲ್ಕತ್ತಾದಲ್ಲಿ 5402 ಜನರಿಗೆ ಪಾಸಿಟಿವ್ ಇದ್ದು, 3123 ಜನ ಗುಣಮುಖರಾಗಿದ್ದಾರೆ. 359 ಜನ ಸತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರು 3321 ಇದ್ದು, 81 ಮಂದಿ ಮೃತಪಟ್ಟಿದ್ದಾರೆ. ದೆಹಲಿ, ಚೆನ್ನೈ, ಕೊಲ್ಕತ್ತಾ, ಮುಂಬೈಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ನಾವು ಶಕ್ತಿ ಮೀರಿ‌ ಕೊರೋನಾ ಹಬ್ಬದಂತೆ ತಡೆದಿದ್ದೇವೆ. ಮನೆ ಮನೆಗೆ ತೆರಳಿ‌ ಕುಟುಂಬ ಸದಸ್ಯರ ಆರೋಗ್ಯ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ. ಇಲ್ಲಿ ಶಂಕಿತರು ಕಂಡುಬಂದರೆ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿದರು.


    ಇದನ್ನು ಓದಿ: Unlock 2.0 Guidelines: ನಾಳೆಗೆ ಅನ್ ಲಾಕ್ -1 ಮುಕ್ತಾಯ; ಜುಲೈ‌ 1ರಿಂದ ಅನ್ ಲಾಕ್ -2 ಜಾರಿ, ಏನಿರಲಿದೆ? ಏನಿರಲ್ಲ?


    ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳೊಂದಿಗೆ ಮಾತನಾಡಿದ ಸಿಎಂ ಬಿಎಸ್​ವೈ ಅವರು,  ಸರ್ಕಾರದ ಜೊತೆ ನೀವು ಕೈ ಜೋಡಿಸಿದರೆ ಮಾತ್ರ ಈ ಪಿಡುಗನ್ನು ತೊಲಗಿಸಲು ಸಾಧ್ಯ.  ಇಲ್ಲವಾದಲ್ಲಿ ಕಷ್ಟ ಆಗುತ್ತೆ. ಜನರ ಕಷ್ಟ ಅರಿತುಕೊಂಡು ನೀವು ಸರ್ಕಾರದ ಜೊತೆ ಕೈ ಜೋಡಿಸಬೇಕು. ನಿಮಗೇ ಏನು ಬೇಕೋ ಅಗತ್ಯ ನೆರವು ಕೊಡಲು ನಾವು ಸಿದ್ದರಿದ್ದೇವೆ. ಆದರೆ ಕೋವಿಡ್​ಗೆ ನೀವು ಚಿಕಿತ್ಸೆ ಕೊಡಲೇಬೇಕು. ನಾವು ಹೇಳಿರುವಷ್ಟು ಬೆಡ್ ಗಳನ್ನು ಮೀಸಲಿಡಬೇಕು. ನಿಮ್ಮ ಏನೇ ಸಮಸ್ಯೆಗಳು ಇದ್ದರೂ ಅದನ್ನು ತಿಳಿಸಿ. ನಮ್ಮ‌ ಸಚಿವರ ಜೊತೆ ಸಮಸ್ಯೆ ಬಗ್ಗೆ ತಿಳಿಸಿ. ಆ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೇವೆ. ಆದರೆ ಕೋವಿಡ್ ತಡೆಗೆ ಸಂಪೂರ್ಣವಾದ ಸಹಕಾರ ಕೊಡಬೇಕು ಎಂದು ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಮನವಿ ಮಾಡಿದರು.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು