ಮುಂಬೈ (ಏ.22): ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕ್ವಾರಂಟೈನ್ಗೆ 1,200 ಹಾಸಿಗೆಗಳಿಂದ 2,000 ಕ್ಕೆ ಹೆಚ್ಚಿಸಲು ಕೇಂದ್ರ ಸಮಿತಿ ಶಿಫಾರಸು ಮಾಡಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ
ಕೊರೋನಾ ವೈರಸ್ ಏಕಾಏಕಿ ಹೆಚ್ಚಾಗುತ್ತಿರು ಹಿನ್ನೆಲೆಯಲ್ಲಿ (ಐಎಂಸಿಟಿ) ಅಂತರ ಸಚಿವಾಲಯದ ತಂಡ ಎರಡು ದಿನಗಳ ಭೇಟಿಗಾಗಿ ಮಂಗಳವಾರ ಮುಂಬೈಗೆ ಆಗಮಿಸಿತ್ತು.
ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಕನಿಷ್ಠ ಆಮ್ಲಜನಕ ಪೂರೈಕೆಯನ್ನು ಒದಗಿಸುವಂತೆ ಕೇಂದ್ರ ಸಮಿತಿ ಸೂಚನೆ ನೀಡಿದೆ. ಸಮಿತಿಯ ನಿರ್ದೇಶನಗಳನ್ನು ಅನುಸರಿಸಿ, ಮುಂಬೈ ನಗರಾದ್ಯಂತ ಹೆಚ್ಚಿನ ಹಾಸಿಗೆಗಳನ್ನು ವ್ಯವಸ್ಥೆ ಮಾಡಲು ಮತ್ತು ಪರೀಕ್ಷೆಯನ್ನು ಹೆಚ್ಚಿಸಲು ಮುಂಬೈ ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ. ಅಗತ್ಯವಿದ್ದರೆ ಮೈದಾನದಲ್ಲಿ ಟೆಂಟ್ಗಳನ್ನು ಸಹ ತೆರೆಯಬಹುದು ಎಂದರು.
ಇದನ್ನೂ ಓದಿ : ಕೊರೋನಾ ಎಫೆಕ್ಟ್; ಓಯೋ ಕಂಪನಿಯ ಭಾರತದ ಎಲ್ಲ ಸಿಬ್ಬಂದಿ ವೇತನ ಕಡಿತ
ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಐಎಂಸಿಟಿ ಬುಧವಾರ ಧಾರವಿಯಲ್ಲಿರುವ ಸಾರಿಗೆ ಶಿಬಿರಗಳಿಗೆ ಭೇಟಿ ನೀಡಿತು. ಕಳೆದ ಎರಡು ದಿನಗಳಲ್ಲಿ ಧಾರವಿ ಯಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗಿಲ್ಲ ಎಂದು ಸಚಿವರು ತಿಳಿಸಿದರು.
ಈ ಭೇಟಿಯ ವೇಳೆ ಮಹಾರಾಷ್ಟ್ರ ಆರೋಗ್ಯ ಸಚಿವ ಟೊಪೆ ಮತ್ತು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಬಿಎಂಸಿಯ ಅಧಿಕಾರಿಗಳು ಇದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ