• ಹೋಂ
  • »
  • ನ್ಯೂಸ್
  • »
  • Corona
  • »
  • CoronaVirus: ಇದು ಕೊಲೆಗಡುಕ ಸರ್ಕಾರ, ಸಚಿವರು ಹೆಣವನ್ನು ಕುಕ್ಕಿ ತಿನ್ನುವ ರಣ ಹದ್ದುಗಳು; ಕಾಂಗ್ರೆಸ್ ಆಕ್ರೋಶ

CoronaVirus: ಇದು ಕೊಲೆಗಡುಕ ಸರ್ಕಾರ, ಸಚಿವರು ಹೆಣವನ್ನು ಕುಕ್ಕಿ ತಿನ್ನುವ ರಣ ಹದ್ದುಗಳು; ಕಾಂಗ್ರೆಸ್ ಆಕ್ರೋಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯಾದ್ಯಂತ ಚಿಕಿತ್ಸೆ, ಲಸಿಕೆ, ಆಕ್ಸಿಜನ್, ಬೆಡ್ ಎಲ್ಲದರ ಕೊರತೆಯಿಂದ ಸೋಂಕಿತರ ಆಕ್ರಂದನ ಮುಗಿಲು ಮುಟ್ಟಿದೆ. ಎಲ್ಲಾ ಸಚಿವರು ಸಮರೋಪಾದಿಯಲ್ಲಿ ಸಂಕಷ್ಟ ನೀಗಿಸುವ ಕೆಲಸ ಮಾಡುವುದನ್ನು ಬಿಟ್ಟು, ಜನ ಸೇರಿಸಿ ಚುನಾವಣಾ ಪ್ರಚಾರದ ಮೆರವಣಿಗೆ ಮೂಲಕ ಸೂಪರ್ ಸ್ಪ್ರೆಡರ್ ಆಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮುಂದೆ ಓದಿ ...
  • Share this:

ಬೆಂಗಳೂರು (ಏಪ್ರಿಲ್ 22); ಭಾರತದಲ್ಲಿ ಕೊರೋನಾ ಎರಡನೇ ಅಲೆ ಮಿತಿ ಮೀರಿದೆ. ಇಂದು ಒಂದೇ ದಿನ ಕನಿಷ್ಟ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಹಳೆಯ ದಾಖಲೆಗಳೂ ಮೀರಿ ಕೊರೋನಾ ಕೈಮೀರುತ್ತಿದೆ. ಇನ್ನೂ ಕರ್ನಾಟಕದಲ್ಲೂ ಸಹ ಪರಿಸ್ಥಿತಿ ಭಿನ್ನವಾಗೇನು ಇಲ್ಲ. ರಾಜ್ಯದಲ್ಲೂ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದು, ಅವರಗೆ ಆಸ್ಪತ್ರೆ ಬೆಡ್​ ಒದಗಿಸುವುದು ಸಹ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಕೊರೋನಾದಿಂದ ಸಾಯುವವರಿಗಿಂತ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಮತ್ತು ಆಕ್ಸಿಜನ್​ ಸಿಗದೆ ಸಾಯುವವರ ಸಂಖ್ಯೆ ಅಧಿಕವಾಗುತ್ತಿದೆ. ಇನ್ನೂ ಮೃತರ ಅಂತ್ಯಕ್ರಿಯೆಯೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಆದರೆ, ಸಮಸ್ಯೆ ಬಗೆಹರಿಸಬೇಕಿದ್ದ ಸಚಿವರುಗಳು ಮಾತ್ರ ಉಪ ಚುನಾವಣೆ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಸಚಿವರುಗಳ ಈ ನಡೆಗೆ ಟ್ವಿಟರ್​ ಮೂಲಕ ಕಿಡಿಕಾರಿರುವ ಕಾಂಗ್ರೆಸ್​ ರಾಜ್ಯ ಘಟಕ, "ಇದು ಕೊಲೆಗಡುಕ ಸರ್ಕಾರ" ಎಂದು ಆಕ್ರೋಶ ವ್ಯಕ್ತಪಡಿಸಿದೆ.



ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಇದು 'ಕೊಲೆಗಡುಕ ಸರ್ಕಾರ'
ಸಚಿವರು ಹೆಣವನ್ನು ಕುಕ್ಕಿ ತಿನ್ನುವ ರಣ ಹದ್ದುಗಳಂತೆ ಭಾಸವಾಗುತ್ತಿದ್ದಾರೆ. ರಾಜ್ಯ ಅತೀ ಭಯಂಕರವಾಗಿ ನರಳುತ್ತಿರುವಾಗಲೇ ಕುಂದುಕೊರತೆಗಳನ್ನು ನೋಡಬೇಕಿದ್ದ ಸಚಿವರಾದ ಶ್ರೀರಾಮುಲು ಒಂದು ಕಡೆ, ಡಿಸಿಎಂ ಅಶ್ವತ್ಥ್​ ನಾರಾಯಣ್ ಮತ್ತೊಂದು ಕಡೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೆ. ಇದು #ಸೋಂಕಿತಸರ್ಕಾರ ಅಲ್ಲದೆ ಇನ್ನೇನು?" ಎಂದು ಆಕ್ರೋಶ ವ್ಯಕ್ತಪಡಿಸಿದೆ.


ಮತ್ತೊಂದು ಟ್ವೀಟ್​ನಲ್ಲಿ ಕೋವಿಡ್​ ಪರಿಸ್ಥಿತಿಯನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್​, "ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇರುವ ವ್ಯವಸ್ಥೆಯೊಳಗೆ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರೂ ವೈದ್ಯರು ಮುತುವರ್ಜಿ ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.





ರಾಜ್ಯಾದ್ಯಂತ ಚಿಕಿತ್ಸೆ, ಲಸಿಕೆ, ಆಕ್ಸಿಜನ್, ಬೆಡ್ ಎಲ್ಲದರ ಕೊರತೆಯಿಂದ ಸೋಂಕಿತರ ಆಕ್ರಂದನ ಮುಗಿಲು ಮುಟ್ಟಿದೆ. ಎಲ್ಲಾ ಸಚಿವರು ಸಮರೋಪಾದಿಯಲ್ಲಿ ಸಂಕಷ್ಟ ನೀಗಿಸುವ ಕೆಲಸ ಮಾಡುವುದನ್ನು ಬಿಟ್ಟು, ಜನ ಸೇರಿಸಿ ಚುನಾವಣಾ ಪ್ರಚಾರದ ಮೆರವಣಿಗೆ ಮೂಲಕ ಸೂಪರ್ ಸ್ಪ್ರೆಡರ್ ಆಗಿದ್ದಾರೆ. ಇದು #ಸೋಂಕಿತಸರ್ಕಾರ ಅಲ್ಲದೆ ಮತ್ತಿನ್ನೇನು?" ಎಂದು ಪ್ರಶ್ನಿಸಿದೆ.


ದೇಶ ಮತ್ತು ರಾಜ್ಯಕ್ಕೆ ಮಾರಕ ಕೊರೋನಾ ವೈರಸ್​ ದಾಳಿ ಇಟ್ಟು ವರ್ಷ ಕಳೆದಿದೆ. ಆದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಜರುಗಿಸಿಲ್ಲ. ಈ ಕುರಿತೂ ಪ್ರಶ್ನೆ ಮಾಡಿರುವ ಕಾಂಗ್ರೆಸ್​, "ಒಂದು ವರ್ಷ ಸಮಯವಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ 2ನೇ ಅಲೆ ಎದುರಿಸಲು ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ. ಕೇಂದ್ರ - ರಾಜ್ಯ ಬಿಜೆಪಿ ಸರ್ಕಾರಗಳ ನಿರ್ಲಕ್ಷ್ಯ ಜನಸಾಮಾನ್ಯರನ್ನು ಬಲಿಪಡೆಯುತ್ತಿದೆ. ಜನರ ಜೀವ ಉಳಿಸಲು ಈ ಸರ್ಕಾರಗಳು ಇದ್ದ ಯಾವ ಅವಕಾಶಗಳನ್ನೂ ಉಪಯೋಗಿಸಿಕೊಳ್ಳಲಿಲ್ಲ.


ಬಿಜೆಪಿ ಸರ್ಕಾರದಿಂದ ಕೊರೋನಾ ರೋಗಿಗಳಿಗೆ ಔಷಧಿ, ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್ ಕೊಡಲು ಆಗಲಿಲ್ಲ. ಕನಿಷ್ಟ ಪಕ್ಷ ಮೃತರಿಗೆ ಗೌರವಯುತ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡಲಿಲ್ಲ. ಕಳೆದೊಂದು ವರ್ಷದಿಂದ ಜನರ ಯಾವ ಸಂಕಷ್ಟಗಳಿಗೂ ಈ #ಸೋಂಕಿತಸರ್ಕಾರ ಸ್ಪಂದಿಸಲಿಲ್ಲ.


ಇದನ್ನೂ ಓದಿ: ರಾಷ್ಟ್ರೀಯ ತುರ್ತುಸ್ಥಿತಿ; ಆಮ್ಲಜನಕ-ಲಸಿಕೆಗೆ ಸಂಬಂಧಿಸಿ ರಾಷ್ಟ್ರೀಯ ನೀತಿ ಜಾರಿಗೆ ತನ್ನಿ; ಕೇಂದ್ರಕ್ಕೆ ಸುಪ್ರೀಂ ಸೂಚನೆ


ಕರೋನಾ ನಿರ್ವಹಣೆಯಲ್ಲಿ ನಿಮ್ಮ #ಸೋಂಕಿತಸರ್ಕಾರ ಸಂಪೂರ್ಣ ಸೋತಿದೆ. ಬೆಡ್, ಆಕ್ಸಿಜನ್, ರೆಮಿಡಿಸಿವಿರ್, ಅಂತ್ಯಕ್ರಿಯೆ, ಹೀಗೆ ಹಲವು ಬಿಕ್ಕಟ್ಟುಗಳನ್ನ ನಿರ್ವಹಿಸಲು ಮಂತ್ರಿಗಳನ್ನು ನೇಮಿಸಿ ಜವಾಬ್ದಾರಿಯನ್ನು ನೀಡಿ. ಇಡೀ ರಾಜ್ಯವನ್ನು 6 ವಿಬಾಗವನ್ನಾಗಿಸಿ ಪ್ರತ್ಯೇಕ ಸಮಿತಿಗಳನ್ನು ರಚಿಸಿ, ಮಂತ್ರಿಗಳಿಗೆ ಉಸ್ತುವಾರಿ ನೀಡಿ" ಎಂದು ಕಿವಿಮಾತು ಹೇಳಿದೆ.

First published: