• ಹೋಂ
  • »
  • ನ್ಯೂಸ್
  • »
  • Corona
  • »
  • ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಐಸಿಯುನಲ್ಲಿದ್ದ 8 ಮಂದಿ ಸಾವು

ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಐಸಿಯುನಲ್ಲಿದ್ದ 8 ಮಂದಿ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಖರವಾಗಿ ಒಂದು ವಾರದ ಹಿಂದೆ, ಆಸ್ಪತ್ರೆಯಲ್ಲಿ ಆಕ್ಸಿಜನ್ ದಾಸ್ತಾನು ಖಾಲಿಯಾದ ನಂತರ ದೆಹಲಿ ಸರ್ಕಾರದಿಂದ ತುರ್ತು ಆಮ್ಲಜನಕ ಪೂರೈಕೆ ಪಡೆದಿತ್ತು. ಕೊರೋನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯ ಮಧ್ಯೆ ನಗರವು ಆಮ್ಲಜನಕದ ಪೂರೈಕೆಯ ಕೊರತೆಯನ್ನು ಎದುರಿಸುತ್ತಿದೆ.

  • Share this:

    ನವದೆಹಲಿ: ಆಮ್ಲಜನಕದ ಕೊರತೆಯಿಂದಾಗಿ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಶನಿವಾರ ವೈದ್ಯರು ಸೇರಿದಂತೆ ಕನಿಷ್ಠ 8 ರೋಗಿಗಳು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಆಸ್ಪತ್ರೆಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ದ್ರವ ವೈದ್ಯಕೀಯ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದೆ. ಮತ್ತು ಮಧ್ಯಾಹ್ನ 1.35 ಕ್ಕೆ ಆಮ್ಲಜನಕ ಟ್ಯಾಂಕರ್ ಪಡೆದುಕೊಂಡಿದೆ ಎನ್ನಲಾಗಿದೆ.


    ಆಮ್ಲಜನಕದ ಕೊರತೆಯೇ ರೋಗಿಗಳ ಸಾವಿಗೆ ಕಾರಣವೇ ಎಂದು ಕೇಳಿದಾಗ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್ಸಿಎಲ್ ಗುಪ್ತಾ ಅವರು, ಹೌದು… ಆಸ್ಪತ್ರೆಯಲ್ಲಿ ಅರ್ಧ ಘಂಟೆಯವರೆಗೆ ಆಮ್ಲಜನಕ ಇರಲಿಲ್ಲ. ಇದರಿಂದಾಗಿ ಎಂಟು ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ.  ಇನ್ನೂ ಐದು ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಉಳಿಸುವ ಎಲ್ಲ ಪ್ರಯತ್ನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.


    ಶನಿವಾರ ಮಧ್ಯಾಹ್ನದಿಂದ ಬರಲಿರುವ ಆಮ್ಲಜನಕದ ಕೊರತೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಆಸ್ಪತ್ರೆಯಲ್ಲಿ 327 ರೋಗಿಗಳನ್ನು ದಾಖಲಿಸಲಾಗಿದ್ದು, ಅವರಲ್ಲಿ 48 ಮಂದಿ ಗಂಭೀರ ಆರೈಕೆ ಘಟಕದಲ್ಲಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರೈಟಿಸ್ ಮುಖ್ಯಸ್ಥ ಡಾ. ಆರ್ ಕೆ ಹಿಮ್ಥಾನಿ (62) ಅವರು ಒಬ್ಬರಾಗಿದ್ದಾರೆ.


    ಇದನ್ನು ಓದಿ: ಸ್ಥಳೀಯ ತಪ್ಪುಗಳಿಂದ ಸರ್ಕಾರ ಮುಜುಗರ ಅನುಭವಿಸಬೇಕಾಗಿದೆ, ಮಾರ್ಗಸೂಚಿ ಪಾಲಿಸದಿದ್ದರೆ ತಲೆದಂಡ ಖಚಿತ; ಸಚಿವ ಕೆ. ಸುಧಾಕರ್ ಎಚ್ಚರಿಕೆ


    ನಿಖರವಾಗಿ ಒಂದು ವಾರದ ಹಿಂದೆ, ಆಸ್ಪತ್ರೆಯಲ್ಲಿ ಆಕ್ಸಿಜನ್ ದಾಸ್ತಾನು ಖಾಲಿಯಾದ ನಂತರ ದೆಹಲಿ ಸರ್ಕಾರದಿಂದ ತುರ್ತು ಆಮ್ಲಜನಕ ಪೂರೈಕೆ ಪಡೆದಿತ್ತು. ಕೊರೋನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯ ಮಧ್ಯೆ ನಗರವು ಆಮ್ಲಜನಕದ ಪೂರೈಕೆಯ ಕೊರತೆಯನ್ನು ಎದುರಿಸುತ್ತಿದೆ.


    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾತನಾಡಿ, ದೆಹಲಿಯಲ್ಲಿ ಸೋಮವಾರದಿಂದ ದೊಡ್ಡ ಪ್ರಮಾಣದ ಲಸಿಕೆ ಅಭಿಯಾನ ಪ್ರಾರಂಭಿಸಲಾಗುವುದು. ಇಂದು ಸಾಂಕೇತಿಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ದೆಹಲಿಯಲ್ಲಿ ಇನ್ನೂ ಆಮ್ಲಜನಕದ ಕೊರತೆಯನ್ನು ನಾವು ಎದುರಿಸುತ್ತಿದ್ದೇವೆ. ನಾವು ಇನ್ನೂ ಆಸ್ಪತ್ರೆಗಳಿಂದ ಎಸ್‌ಒಎಸ್ ಪಡೆಯುತ್ತಿದ್ದೇವೆ. ನಾವು ನ್ಯಾಯಾಲಯಗಳು ಮತ್ತು ಕೇಂದ್ರಕ್ಕೆ ತಿಳಿಸಿದ್ದೇವೆ. ನಮಗೆ 900 ಮೆಟ್ರಿಕ್ ಟನ್ ಗಿಂತ ಹೆಚ್ಚಿನ ಆಕ್ಸಿಜನ್ (ಒ2) ಅಗತ್ಯವಿದೆ. ಆದರೆ ನಮಗೆ ಕೇಂದ್ರದಿಂದ ಕೇವಲ 490 ಮೆಟ್ರಿಕ್ ಟನ್ ಆಕ್ಸಿಜನ್ ಮಾತ್ರ ನೀಡಲಾಗಿದೆ. ಇದನ್ನು ಹೆಚ್ಚಿಸಬೇಕಾಗಿದೆ. ಕೆಲವು ಆಸ್ಪತ್ರೆಗಳು ರೋಗಿಗಳನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. 

    Published by:HR Ramesh
    First published: