Maha Shivaratri 2023: ಮಲೆ ಮಹದೇಶ್ವರ ಬೆಟ್ಟಕ್ಕೆ ಈ ವಾಹನ‌ಗಳಿಗೆ ಪ್ರವೇಶ ಬ್ಯಾನ್

ಮಲೆ ಮಹದೇಶ್ವರ ಬೆಟ್ಟ

ಮಲೆ ಮಹದೇಶ್ವರ ಬೆಟ್ಟ

Maha Shivaratri In Male Mahadeshwara Betta: ಫೆಬ್ರವರಿ 17 ರ ಶಿವರಾತ್ರಿಯಂದು ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದ್ದು ರಾತ್ರಿಯಿಡಿ ವಿಶೇಷ ಅಭಿಷೇಕ ಪೂಜೆ ಪುನಸ್ಕಾರಗಳು ನಡೆಯಲಿವೆ.

  • News18 Kannada
  • 5-MIN READ
  • Last Updated :
  • Chamarajanagar, India
  • Share this:

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Betta) ಶಿವರಾತ್ರಿಯ ರಂಗು (Maha Shivaratri) ಕಳೆಗಟ್ಟುತ್ತಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿರುವ ಕಾರಣ ಫೆಬ್ರವರಿ 17ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 21ರ ಸಂಜೆ 7 ಗಂಟೆಯವರೆಗೆ ದ್ವಿಚಕ್ರ ವಾಹನ‌ಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ರಮೇಶ್ ಅಧಿಕೃತ ಆದೇಶ ಪ್ರಕಟಿಸಿದ್ದಾರೆ.


    ಮಲೆ ಮಹದೇಶ್ವರನಿಗೆ ಶಿವರಾತ್ರಿಯಲ್ಲಿ ವಿಶೇಷ ಪೂಜೆ-ಪುನಸ್ಕಾರ
    ಫೆಬ್ರವರಿ 18 ರ ಶಿವರಾತ್ರಿಯಂದು ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದ್ದು, ರಾತ್ರಿಯಿಡಿ ವಿಶೇಷ ಅಭಿಷೇಕ ಪೂಜೆ ಪುನಸ್ಕಾರಗಳು ನಡೆಯಲಿವೆ. ಫೆಬ್ರವರಿ 19 ಹಾಗೂ 20 ರಂದು ವಿಶೇಷ ಸೇವೆ, ಉತ್ಸವಗಳು ಹಾಗೂ ಫೆಬ್ರವರಿ 21 ರಂದು ಮಹಾ ರಥೋತ್ಸವ ಜರುಗಲಿದೆ.


    ಇದನ್ನೂ ಓದಿ: Chamarajanagar: ಪೊಲೀಸ್ ಅಧಿಕಾರಿ ಹುದ್ದೆಗೆ ಗುಡ್‌ ಬೈ, ರಾಜಕೀಯಕ್ಕೆ ಜೈ ಎಂದ ಇನ್ಸ್​ಪೆಕ್ಟರ್!


    ಕಾಲ್ನಡಿಗೆಯಲ್ಲೇ ಸಹಸ್ರಾರು ಭಕ್ತರ ಆಗಮನ
    ಮಲೆ ಮಹದೇಶ್ವರ ಬೆಟ್ಟಕ್ಕೆ ವಯಸ್ಸಿನ ಬೇಧವಿಲ್ಲದೇ ಮಹಿಳೆಯರು ಮಕ್ಕಳೆನ್ನದೆ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲೆ ಬರತೊಡಗಿದ್ದಾರೆ. ಕೋಲಾರ ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಆನೇಕಲ್ ಹೀಗೆ ನಾನಾ ಕಡೆಯಿಂದ ಕಡೆಯಿಂದ ಜೀವಭಯ ಲೆಕ್ಕಿಸದೇ ಕಾವೇರಿ ನದಿ ದಾಟಿ ಕಾಡು ಮೇಡು ಸುತ್ತಿ ಭಕ್ತರು ಮಾದಪ್ಪನ ಬೆಟ್ಟದತ್ತ ಧಾವಿಸುತ್ತಿದ್ದಾರೆ.




    ಇದನ್ನೂ ಓದಿ: Chamarajanagar: ಮಗಳಿಲ್ಲ ಎಂದು ಸಾಕಿದ ಬೆಕ್ಕಿಗೇ ಸೀಮಂತ ಮಾಡಿದ ದಂಪತಿ!


    ನಾವು ಕೇಳಿದ್ದೆಲ್ಲ ಕೊಟ್ಟ ಮಹದೇಶ್ವರನಿಗೆ ಇಷ್ಟಾದ್ರೂ ಮಾಡ್ಬೇಕಲ್ಲ!
    "ಮಹದೇಶ್ವರ ನಾವು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾನೆ. ಹರಕೆ ಸಲ್ಲಿಸಲು ಕಾಲ್ನಡಿಗೆಯಲ್ಲೇ ಬರುತ್ತಿದ್ದೇವೆ. ದಟ್ಟ ಅರಣ್ಯದ ನಡುವೆ ನಡೆದು ಬಂದರೂ ಮಹದೇಶ್ವರನ ಕೃಪೆಯಿಂದಾಗಿ ತಮಗೆ ಯಾವುದೇ ಪ್ರಾಣಿಗಳು ತೊಂದರೆ ಮಾಡಲ್ಲ. ಮಾದಪ್ಪನ ಧ್ಯಾನ ಮಾಡುತ್ತಾ ಬರುವುದರಿಂದ ಎಷ್ಟೇ ದೂರ ನಡೆದರೂ ಯಾವುದೇ ರೀತಿಯ ದಣಿವೂ ಆಗುತ್ತಿಲ್ಲ" ಎನ್ನುತ್ತಾರೆ ಭಕ್ತರು.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು