• ಹೋಂ
  • »
  • ನ್ಯೂಸ್
  • »
  • ಚಾಮರಾಜನಗರ
  • »
  • Maha Shivaratri 2023: ಕೇಳಿದ್ದೆಲ್ಲ ಕೊಡುವ ಮಹದೇಶ್ವರನಿಗೆ ಇಷ್ಟಾದ್ರೂ ಮಾಡ್ಬೇಕಲ್ಲ! ದರ್ಶನಕ್ಕೆ ಭಕ್ತರ ಸಾಹಸ

Maha Shivaratri 2023: ಕೇಳಿದ್ದೆಲ್ಲ ಕೊಡುವ ಮಹದೇಶ್ವರನಿಗೆ ಇಷ್ಟಾದ್ರೂ ಮಾಡ್ಬೇಕಲ್ಲ! ದರ್ಶನಕ್ಕೆ ಭಕ್ತರ ಸಾಹಸ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕೋಲಾರ ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಆನೆಕಲ್ ಹೀಗೆ ನಾನಾ ಕಡೆಯಿಂದ ಕಡೆಯಿಂದ ಜೀವಭಯ ಲೆಕ್ಕಿಸದೇ ಕಾವೇರಿ ನದಿ ದಾಟಿ ಕಾಡು ಮೇಡು ಸುತ್ತಿ ಭಕ್ತರು ಮಾದಪ್ಪನ ಬೆಟ್ಟದತ್ತ ಧಾವಿಸುತ್ತಿದ್ದಾರೆ.

  • News18 Kannada
  • 4-MIN READ
  • Last Updated :
  • Chamarajanagar, India
  • Share this:

    ಚಾಮರಾಜನಗರ: ಏಳು ಮಲೆ..ಎಪ್ಪತ್ತೇಳು ಮಲೆಗಳ ಒಡೆಯ ಮಹದೇಶ್ವರ (Male Mahadeshwara Temple)  ಕೋಟ್ಯಂತರ ಮಂದಿ ಭಕ್ತರ ಆರಾಧ್ಯದೈವ. ಮಾದಪ್ಪನ ಸನ್ನಿಧಿಯಲ್ಲಿ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಆಚರಣೆ (Maha Shivaratri 2023) ಮಾಡುವುದೆಂದೆರೆ ಭಕ್ತರಿಗೆ ಎಲ್ಲಿಲ್ಲದ ಉತ್ಸಾಹ. ಹಾಗಾಗಿಯೇ ಸಹಸ್ರ ಸಹಸ್ರ ಮಂದಿ ಭಕ್ತರು ಕಲ್ಲು ಮುಳ್ಳುಗಳ ಹಾದಿಯಲ್ಲಿ ಕಾಡುಮೇಡು ಸುತ್ತಿ ಕಾಲ್ನಡಿಗೆಯಲ್ಲೇ ಬೆಟ್ಟದತ್ತ ಧಾವಿಸುತ್ತಿದ್ದಾರೆ. ಜೀವದ ಹಂಗನ್ನು ತೊರೆದು ಕಾವೇರಿ ನದಿ (Kaveri River) ದಾಟಿ ಮಾದಪ್ಪನ ಸನ್ನಿಧಿಗೆ ಬರತೊಡಗಿದ್ದಾರೆ.


    ಮಲೆಮಹದೇಶ್ವರ ಬೆಟ್ಟಕ್ಕೆ ವಯಸ್ಸಿನ ಬೇಧವಿಲ್ಲದೇ ಮಹಿಳೆಯರು ಮಕ್ಕಳೆನ್ನದೆ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲೆ ಬರತೊಡಗಿದ್ದಾರೆ. ಕೋಲಾರ ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಆನೇಕಲ್ ಹೀಗೆ ನಾನಾ ಕಡೆಯಿಂದ ಕಡೆಯಿಂದ ಜೀವಭಯ ಲೆಕ್ಕಿಸದೇ ಕಾವೇರಿ ನದಿ ದಾಟಿ ಕಾಡು ಮೇಡು ಸುತ್ತಿ ಭಕ್ತರು ಮಾದಪ್ಪನ ಬೆಟ್ಟದತ್ತ ಧಾವಿಸುತ್ತಿದ್ದಾರೆ.


    ನಾವು ಕೇಳಿದ್ದೆಲ್ಲ ಕೊಟ್ಟ ಮಹದೇಶ್ವರನಿಗೆ ಇಷ್ಟಾದ್ರೂ ಮಾಡ್ಬೇಕಲ್ಲ!
    "ಮಹದೇಶ್ವರ ನಾವು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾನೆ. ಹರಕೆ ಸಲ್ಲಿಸಲು ಕಾಲ್ನಡಿಗೆಯಲ್ಲೇ ಬರುತ್ತಿದ್ದೇವೆ. ದಟ್ಟ ಅರಣ್ಯದ ನಡುವೆ ನಡೆದು ಬಂದರೂ ಮಹದೇಶ್ವರನ ಕೃಪೆಯಿಂದಾಗಿ ತಮಗೆ ಯಾವುದೇ ಪ್ರಾಣಿಗಳು ತೊಂದರೆ ಮಾಡಲ್ಲ. ಮಾದಪ್ಪನ ಧ್ಯಾನ ಮಾಡುತ್ತಾ ಬರುವುದರಿಂದ ಎಷ್ಟೇ ದೂರ ನಡೆದರೂ ಯಾವುದೇ ರೀತಿಯ ದಣಿವೂ ಆಗುತ್ತಿಲ್ಲ" ಎನ್ನುತ್ತಾರೆ ಭಕ್ತರು


    ಇದನ್ನೂ ಓದಿ: Chamarajanagar: ಸಿಹಿ ಜೇನಷ್ಟೇ ಅಲ್ಲ, ಇಲ್ಲಿ ಕಹಿ ಜೇನೂ ಸಿಗುತ್ತೆ!


    ಅಲ್ಲಲ್ಲಿ ಊಟ ತಿಂಡಿಯ ವ್ಯವಸ್ಥೆ
    ಹೀಗೆ ಕಾಲ್ನಡಿಗೆಯಲ್ಲಿ ದಣಿದು ಬರುವ ಭಕ್ತರಿಗೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ನಾನಾ ಕಡೆ ದಾನಿಗಳು ಊಟ, ತಿಂಡಿ ,ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ಸೌಲಭ್ಯ ಕಲ್ಪಿಸಿದ್ದಾರೆ. ಭಕ್ತರಿಗೆ ದಾರಿಯುದ್ದಕ್ಕೂ ಊಟ ತಿಂಡಿ ಅಷ್ಟೇ ಅಲ್ಲದೆ ಕುಡಿಯುವ ನೀರು, ಮಜ್ಜಿಗೆ, ಪಾನಕ, ತಂಪು ಪಾನೀಯಗಳನ್ನು ನೀಡಿ ಭಕ್ತರ ದಣಿವಾರಿಸುತ್ತಿದ್ದಾರೆ.




    ಮಲೆ ಮಹದೇಶ್ವರನಿಗೆ ಶಿವರಾತ್ರಿಯಲ್ಲಿ ವಿಶೇಷ ಪೂಜೆ-ಪುನಸ್ಕಾರ
    ಫೆಬ್ರವರಿ 18 ರ ಶಿವರಾತ್ರಿಯಂದು ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದ್ದು ರಾತ್ರಿಯಿಡಿ ವಿಶೇಷ ಅಭಿಷೇಕ ಪೂಜೆ ಪುನಸ್ಕಾರಗಳು ನಡೆಯಲಿವೆ. ಫೆಬ್ರವರಿ 19 ಹಾಗೂ 20 ರಂದು ವಿಶೇಷ ಸೇವೆ ಹಾಗು ಉತ್ಸವಗಳು ಹಾಗೂ ಫೆಬ್ರವರಿ 21 ಮಹಾ ರಥೋತ್ಸವ ಜರುಗಲಿದೆ.


    ಇದನ್ನೂ ಓದಿ: Chamarajanagar: ಪೊಲೀಸ್ ಅಧಿಕಾರಿ ಹುದ್ದೆಗೆ ಗುಡ್‌ ಬೈ, ರಾಜಕೀಯಕ್ಕೆ ಜೈ ಎಂದ ಇನ್ಸ್​ಪೆಕ್ಟರ್!


    ಮಾದಪ್ಪನ ಭಕ್ತ ಸಮೂಹ ಶಿವರಾತ್ರಿ ದಿನವಾದ ಶುಕ್ರವಾರ ಅಥವಾ ಅದರ ಹಿಂದಿನ ದಿನವೇ ಬೆಟ್ಟ ತಲುಪುವ ನಿರೀಕ್ಷೆ ಇದ್ದು ಐದು ಲಕ್ಷಕ್ಕೂ ಅಧಿಕ ಮಂದಿ ಸೇರಬಹುದು ಎಂದು ಅಂದಾಜಿಸಲಾಗಿದೆ.


    ವರದಿ: ನಂದೀಶ್, ಚಾಮರಾಜನಗರ

    Published by:ಗುರುಗಣೇಶ ಡಬ್ಗುಳಿ
    First published: