• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Nirmala Sitharaman Viral Video: ವಿಡಿಯೋದಲ್ಲಿ ಬಯಲಾಯ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾನವೀಯತೆ! ವೈರಲ್ ವಿಡಿಯೋ ನೋಡಿ

Nirmala Sitharaman Viral Video: ವಿಡಿಯೋದಲ್ಲಿ ಬಯಲಾಯ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾನವೀಯತೆ! ವೈರಲ್ ವಿಡಿಯೋ ನೋಡಿ

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾವು ಕುಳಿತ ಸ್ಥಳದಲಿಂದ ಎದ್ದು ಬಂದು ನೀರಿನ ಬಾಟಲಿ ತಂದುಕೊಡುವುದು ಎಂದರೆ ಸಣ್ಣ ಸಂಗತಿ ಅಲ್ಲ. ಅದು ಅವರಲ್ಲಿ ಇರುವ ಮಾನವೀಯತೆಗೆ ಸಾಕ್ಷಿ ಎಂದು ನೆಟ್ಟಿಗರು ಅಪಾರ ಸಂಖ್ಯೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ

  • Share this:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆಟ್ಟಿಗರ ಮನ ಗೆದ್ದುಬಿಟ್ಟಿದ್ದಿದ್ದಾರೆ. ಅವರು ಬಜೆಟ್ ಮಂಡಿಸಿದಾಗಲೂ ಇಷ್ಟು ವೈರಲ್ ಆಗಿರಲಿಲ್ಲವೇನೋ! ಒಂದೇ ಒಂದು ವಿಡಿಯೋ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರನ್ನು ಫುಲ್ ವೈರಲ್ ಮಾಡಿದೆ. ಅರೇ! ಅದ್ಯಾವ ವಿಡಿಯೋ? (Nirmala Sitharaman Viral Video) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಇಂಟರ್​ನೆಟ್ ಬಳಕೆದಾರರು ಮೆಚ್ಚಿ ಹೊಗಳೋಕೆ ಏನು ಕಾರಣ? ಆ ವಿಡಿಯೋ ಆದರೂ ಯಾವ್ದು? ಇಲ್ಲಿದೆ ನೋಡಿ ಆ ವಿಡಿಯೋ ಮತ್ತು ಘಟನೆಯ ಸಂಪೂರ್ಣ ವಿವರ.


ಮುಂಬೈನಲ್ಲಿ ಶನಿವಾರ ನಡೆದ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಎನ್‌ಎಸ್‌ಡಿಎಲ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಆಸನದಿಂದ ಎದ್ದು ನೀರಿನ ಬಾಟಲಿಯನ್ನು ನೀಡಿ ಆನ್‌ಲೈನ್‌ ಜಗತ್ತಿನಲ್ಲಿ ಭರ್ಜರಿ ಪ್ರಶಂಸೆ ಗಳಿಸಿದ್ದಾರೆ.



ಪದ್ಮಜಾ ಚುಂಡೂರು ಅವರು ತಮ್ಮ ಭಾಷಣದಲ್ಲಿ ಮಧ್ಯದಲ್ಲೇ ನೀರು ಕೇಳಿದರು. ಆಗ ಎನ್‌ಎಸ್‌ಡಿಎಲ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರು ಇದ್ದಲ್ಲಿಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀರಿನ ಬಾಟಲಿ ತಂದುಕೊಟ್ಟರು. ಈ ವಿಡಿಯೋ ವ್ಯಾಪಕ ಪ್ರಶಂಸೆ ಗಿಟ್ಟಿಸಿಕೊಂಡಿದೆ.  ಅಲ್ಲದೇ ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಾವಭಾವ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದೆ.





ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಚುಂಡೂರು ಅವರು ನೀರು ಕೇಳಿದಾಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಡಚಣೆಗೆ ಕ್ಷಮೆಯಾಚಿಸಿ ತನ್ನ ಮಾತನ್ನು ಮುಂದುವರಿಸಿದಳು. ಸೀತಾರಾಮನ್ ನೀರಿನ ಬಾಟಲಿಯೊಂದಿಗೆ ಅವರ ಹತ್ತಿರ ಬಂದರು. ಅರೇ, ಸಭೆಯಲ್ಲಿ ಏನಾಗ್ತಿದೆ? ಎಂದು ಎಲ್ಲರೂ  ನೋಡನೋಡುತ್ತಿದ್ದಂತೆಯೇ ಆ ಘಟನೆ ನಡೆದೇ ಹೋಗಿದೆ.


ಇದನ್ನೂ ಓದಿ: Indian Railway: ರೈಲುಗಳ ಎಸಿ ಕೋಚ್, ಜನರಲ್ ಬೋಗಿಗಳು ಅಲ್ಲಲ್ಲೇ ಇರೋದೇಕೆ? ರೈಲುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ ಇದು!


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾವು ಕುಳಿತ ಸ್ಥಳದಲಿಂದ ಎದ್ದು ಬಂದು ನೀರಿನ ಬಾಟಲಿ ತಂದುಕೊಡುವುದು ಎಂದರೆ ಸಣ್ಣ ಸಂಗತಿ ಅಲ್ಲ. ಅದು ಅವರಲ್ಲಿ ಇರುವ ಮಾನವೀಯತೆಗೆ ಸಾಕ್ಷಿ ಎಂದು ನೆಟ್ಟಿಗರು ಅಪಾರ ಸಂಖ್ಯೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.


ನೀರಿನ ಬಾಟಲಿಯನ್ನು ತಂದುಕೊಟ್ಟಿರುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪದ್ಮಜಾ ಚುಂಡೂರು ಅವರು ಅದೇ ಸಂದರ್ಭದಲ್ಲೇ ಧನ್ಯವಾದ ಅರ್ಪಿಸಿದ್ದಾರೆ.


ಇದನ್ನೂ ಓದಿ: Toyota Invest in Karnataka: ಟೊಯೋಟಾ ಕರ್ನಾಟಕದಲ್ಲೇ 4,800 ಕೋಟಿ ಹೂಡಿಕೆ ಮಾಡಿದ್ದೇಕೆ?


ಬರೀ ನೀರಿನ ಬಾಟಲಿ ತಂದುಕೊಟ್ಟದ್ದು ಒಂದೇ ಅಲ್ಲ, ಕೇಂದ್ರ ಹಣಕಾಸು ಸಚಿವೆ ಎಂಬ ಯಾವ ಹಮ್ಮುಬಿಮ್ಮು ಏನೂ ಇಲ್ಲದೇ ನಿರ್ಮಲಾ ಸೀತಾರಾಮನ್   ಬಾಟಲಿ ತೆರೆದು ಲೋಟಕ್ಕೆ ನೀರು ಸುರಿದು ಕುಡಿಯಲು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಸಭಿಕರು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಚಪ್ಪಾಳೆ ತಟ್ಟಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

top videos
    First published: