• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • FM Nirmala Sitharaman Interview: ಅದಾನಿ ಗ್ರೂಪ್ಸ್ ಬಗ್ಗೆ ನಿರ್ಮಲಾ ಸೀತಾರಾಮನ್ ಮೊಟ್ಟಮೊದಲ ಪ್ರತಿಕ್ರಿಯೆ, ಎಲ್ಐಸಿ-ಎಸ್​ಬಿಐ ಕತೆ ಏನು?

FM Nirmala Sitharaman Interview: ಅದಾನಿ ಗ್ರೂಪ್ಸ್ ಬಗ್ಗೆ ನಿರ್ಮಲಾ ಸೀತಾರಾಮನ್ ಮೊಟ್ಟಮೊದಲ ಪ್ರತಿಕ್ರಿಯೆ, ಎಲ್ಐಸಿ-ಎಸ್​ಬಿಐ ಕತೆ ಏನು?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಈ ಬಾರಿ ಮಧ್ಯಮರ್ಗಕ್ಕೆ ನಿರ್ಮಲಾ ಸೀತಾರಾಮನ್ ಬಂಪರ್​ ಗಿಫ್ಟ್​ ನೀಡಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯನ್ನು ತಂದಿದ್ದಾರೆ. ಬಜೆಟ್​ ಮುಗಿದ ಬಳಿಕ ಮೊದಲ ಬಾರಿಗೆ ನ್ಯೂಸ್ 18 ಜೊತೆಗಿನ ವಿಶೇಷ ಸಂವಾದದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಭಾಗಿಯಾಗಿದ್ದರು.

  • Share this:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)  ಲೋಕಸಭೆಯಲ್ಲಿ ವರ್ಷ 2023-24ನೇ ಸಾಲಿನ ಬಜೆಟ್ (Budget) ಮಂಡನೆಯನ್ನು ಮಂಡಿಸಿದ್ದಾರೆ. ಈ ಬಾರಿ ಮಧ್ಯಮರ್ಗಕ್ಕೆ (Middle Class) ನಿರ್ಮಲಾ ಸೀತಾರಾಮನ್ ಬಂಪರ್​ ಗಿಫ್ಟ್​ ನೀಡಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯನ್ನು ತಂದಿದ್ದಾರೆ. ಬಜೆಟ್​ ಮುಗಿದ ಬಳಿಕ ಮೊದಲ ಬಾರಿಗೆ ನ್ಯೂಸ್ 18 ಜೊತೆಗಿನ ವಿಶೇಷ ಸಂವಾದದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಭಾಗಿಯಾಗಿದ್ದರು. ಈ ವೇಳೆ ಬಜೆಟ್​ ಸೇರಿದಂತೆ ಮುಂದಿನ ಒಂದು ವರ್ಷದಲ್ಲಿ ಮೋದಿ (Modi) ಸರ್ಕಾರದಿಂದ ಜನತೆಗೆ ಏನೆಲ್ಲಾ ಪ್ರಯೋಜನ ಸಿಗಲಿದೆ ಅನ್ನೋದರ ಬಗ್ಗೆಯೂ ಮಾತನಾಡಿದರು. ಇನ್ನೂ ಕಳೆದ ಕೆಲ ದಿನಗಳಿಂದ ಟ್ರೆಂಡಿಂಗ್​ ಅಲ್ಲಿರುವ ಅದಾನಿ (Adani Row) ಲಾಸ್​ ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ.


'LIC, SBI ಅದಾನಿ ಸಮೂಹಕ್ಕೆ ಮಾನ್ಯತೆ ಮಿತಿಯಲ್ಲಿದೆ'


ಕಳೆದ ಕೆಲವು ದಿನಗಳಿಂದ ಅದಾನಿ ಕಂಪನಿ ಭಾರೀ ನಷ್ಟದಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಾನಿ ಸಾಮ್ರಾಜ್ಯದ ಪತನ ಶುರುವಾಗಿದೆ ಅನ್ನು ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದರು.


"LIC, SBI ಅದಾನಿ ಸಮೂಹಕ್ಕೆ ಮಾನ್ಯತೆ ಮಿತಿಯಲ್ಲಿದೆ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಆರಾಮದಾಯಕ ಮಟ್ಟದಲ್ಲಿದೆ. ಒಂದು ನಿದರ್ಶನವು ಸೂಚಕವಲ್ಲ, ಜಾಗತಿಕ ಹೂಡಿಕೆದಾರರಿಗೆ ಭರವಸೆ ನೀಡುತ್ತದೆ, ಭಾರತವು ಉತ್ತಮವಾಗಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಗುರುವಾರ ಮೂರು ಅದಾನಿ ಗ್ರೂಪ್ ಕಂಪನಿಗಳನ್ನು ಹೆಚ್ಚುವರಿ ಕಣ್ಗಾವಲು ಮಾರ್ಜಿನ್ ಫ್ರೇಮ್‌ವರ್ಕ್‌ಗೆ (ಎಎಸ್‌ಎಂ) ಸೇರಿಸಲು ನಿರ್ಧರಿಸಿದೆ. ಅದಾನಿ ಗ್ರೂಪ್‌ನ ಈ 3 ಕಂಪನಿಗಳಲ್ಲಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ ಮತ್ತು ಅಂಬುಜಾ ಸಿಮೆಂಟ್ ಸೇರಿವೆ.


ಇದನ್ನೂ ಓದಿ: ಗೇಮ್ ಚೇಂಜರ್ ಆಗುತ್ತಾ ಪಿಎಂ ವಿಕಾಸ್ ಯೋಜನೆ? ಸಂದರ್ಶನದಲ್ಲಿ ಮಹತ್ವದ ವಿಚಾರ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್


ಪ್ರಧಾನ ಮಂತ್ರಿ ವಿಕಾಸ್ ಯೋಜನೆ ವಿತ್ತ ಸಚಿವೆ ಹೇಳಿದ್ದೇನು?


ಪ್ರಧಾನಮಂತ್ರಿ ವಿಕಾಸ್ ಯೋಜನೆ ಕುರಿತು ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಹೇಳಿಕೆ ನೀಡಿದ್ದಾರೆ. 'ನಾನು ಪ್ರಧಾನಮಂತ್ರಿ-ವಿಕಾಸ್ ಯೋಜನೆಯನ್ನು ಬಹಳ ಭರವಸೆಯಿಂದ ನೋಡುತ್ತಿದ್ದೇನೆ. ಏಕೆಂದರೆ ಇದು ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಈ ಯೋಜನೆ ಪ್ರಾರಂಭದಿಂದ ನಾವು ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಲು ಸಾಧ್ಯವಾಗುತ್ತದೆ.' ಎಂದು ಅವರು ಹೇಳಿದರು.


2023ರ ಬಜೆಟ್ ಬಗ್ಗೆ ವಿತ್ತ ಸಚಿವರು ಹೇಳಿದ್ದೇನು?


2023 ರ ಬಜೆಟ್‌ನಿಂದ ನಿರೀಕ್ಷಿತ ಪ್ರಮುಖ ಫಲಿತಾಂಶಗಳ ಕುರಿತು ಮಾತನಾಡುತ್ತಾ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನ್ಯೂಸ್ 18 ಗೆ ತಿಳಿಸಿದರು, 'ವಿದೇಶದಿಂದ ಬರುವ ಜನರೊಂದಿಗೆ ಪ್ರವಾಸೋದ್ಯಮದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಆರ್ಥಿಕತೆಯನ್ನು ಸಕ್ರಿಯವಾಗಿಡಲು ಇದು ಉತ್ತಮ ಮಾರ್ಗವಾಗಿದೆ" ಎಂದು ಅವರು ಹೇಳಿದರು.


ಕೋವಿಡ್​ ಸಮಯದಲ್ಲಿ ಪಣ ತೊಟ್ಟಿದ್ದರಂತೆ ಮೋದಿ!


ಮಾತು ಮುಂದುವರಿಸಿದ ನಿರ್ಮಲಾ ಸೀತಾರಾಮನ್​, "ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿರಂತರ ಚರ್ಚೆ ನಡೆಸಲಾಯಿತು. ಈ ಪರಿಸ್ಥಿತಿಯನ್ನು ನಿಭಾಯಿಸಲು ನನ್ನ ಮುಂದೆ ಯಾವುದೇ ಉದಾಹರಣೆ ಇಲ್ಲ. ಈ ಹಿಂದೆ ಇಂಥದ್ದೇನೂ ನಡೆದಿರಲಿಲ್ಲ. ಇದರಿಂದ ಕೆಲವು ವಿಷಯಗಳನ್ನು ಅನುಸರಿಸಬಹುದು. ಸಾಂಕ್ರಾಮಿಕ ರೋಗದ ನಂತರ, ನಾವು ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಂವಹನವನ್ನು ಮುಂದುವರೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಯ ನೇತೃತ್ವ ವಹಿಸಿದ್ದರು" ಎಂದು ಅವರು ಹೇಳಿದರು.

Published by:ವಾಸುದೇವ್ ಎಂ
First published: