Know About Budget 2022 Team Of Nirmala Sitharaman: ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ದೇಶದ ಸಾಮಾನ್ಯ ಬಜೆಟ್ (Budget) ಮಂಡಿಸಲಿದ್ದಾರೆ. ಕೊರೊನಾ ಮಹಾಮಾರಿಯ (Corona Pandemic) ವಿರುದ್ಧ ಹೋರಾಡುತ್ತಿರುವ ದೇಶದ ಆರ್ಥಿಕತೆಯು ಈ ಸಾಮಾನ್ಯ ಬಜೆಟ್ನಿಂದ ಹೊಸ ಹಾದಿಯನ್ನು ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ದೇಶವಾಸಿಗಳು ಬಜೆಟ್ ನಲ್ಲಿ ಏನಿರಲಿದೆ ಎಂದು ಕಾಯುತ್ತಿದ್ದಾರೆ. ವಿತ್ತ ಸಚಿವರ ಜತೆಗೆ ಇಡೀ ತಂಡ (Nirmala Sitharaman Team) ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸಿದ್ಧಪಡಿಸುತ್ತಿದೆ. ಇಂದು ನಾವು ಬಜೆಟ್ ತಂಡದಲ್ಲಿ ಒಳಗೊಂಡಿರುವ ವಿಶೇಷ ವ್ಯಕ್ತಿಗಳ ಮಾಹಿತಿ ಇಲ್ಲಿದೆ.
ನಿರ್ಮಲಾ ಸೀತಾರಾಮನ್
ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ನಾಲ್ಕನೇ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಕಳೆದ ಹಣಕಾಸು ವರ್ಷದ ಬಜೆಟ್ ಅನ್ನು ಸಹ ಕೊರೊನಾ ನೆರಳಿನಲ್ಲಿ ಮಂಡಿಸಿದರು. ಈಗ ಕೋವಿಡ್ 19 ರ ಹೊಸ ರೂಪಾಂತರದ ದೃಷ್ಟಿಯಿಂದ ಈ ಬಾರಿಯ ಬಜೆಟ್ ಕೂಡ ಹೆಚ್ಚು ಮಹತ್ವದ್ದಾಗಿದೆ.
ಸಾಂಕ್ರಾಮಿಕ ಮತ್ತು ಆರ್ಥಿಕ ಕುಸಿತದ ಸಮಯದಲ್ಲಿ ಆರ್ಥಿಕ ಪ್ರತಿಕ್ರಿಯೆಯನ್ನು ಒದಗಿಸಲು ಸೀತಾರಾಮನ್ ಸರ್ಕಾರದ ಮುಖ್ಯ ಮುಖವಾಗಿ ಹೊರಬಂದಿದ್ದಾರೆ.
ಇದನ್ನೂ ಓದಿ: Union Budget 2022: ಬಜೆಟ್ ಮಂಡನೆಗೆ ಒಂದು ವಾರ ಬಾಕಿ; ದಿನಾಂಕ, ಸಮಯ ಸೇರಿದಂತೆ ಈ ಮಾಹಿತಿ ನಿಮಗಿರಲಿ
ಟಿ.ವಿ.ಸೋಮನಾಥನ್
ಹಣಕಾಸು ಸಚಿವಾಲಯದಲ್ಲಿ ವೆಚ್ಚ ಕಾರ್ಯದರ್ಶಿಯ ಜವಾಬ್ದಾರಿಯನ್ನು ಹೊಂದಿರುವ ಟಿವಿ ಸೋಮನಾಥನ್ ಈ ಬಜೆಟ್ ತಂಡದ ಪ್ರಮುಖರು. ಹಣಕಾಸು ಸಚಿವಾಲಯದ ಐದು ಕಾರ್ಯದರ್ಶಿಗಳಲ್ಲಿ ಅತ್ಯಂತ ಹಿರಿಯರನ್ನು ಹಣಕಾಸು ಕಾರ್ಯದರ್ಶಿಯಾಗಿ ನೇಮಿಸುವುದು ಸಂಪ್ರದಾಯವಾಗಿದೆ. ಸದ್ಯ ಈ ದೊಡ್ಡ ಜವಾಬ್ದಾರಿಯನ್ನು ಸೋಮನಾಥನ್ ನಿಭಾಯಿಸುತ್ತಿದ್ದಾರೆ.
ಸೋಮನಾಥನ್ ತಮಿಳುನಾಡು ಕೇಡರ್ನ 1987 ಬ್ಯಾಚ್ನ ಐಎಎಸ್ ಅಧಿಕಾರಿ. ಇದಕ್ಕೂ ಮುನ್ನ ಅವರು ವಿಶ್ವಬ್ಯಾಂಕ್ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಕೋಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿರುವ ಸೋಮನಾಥನ್ ಅವರಿಗೆ ಬಜೆಟ್ನಲ್ಲಿ ವೆಚ್ಚವನ್ನು ನಿಯಂತ್ರಣದಲ್ಲಿಡುವುದು ದೊಡ್ಡ ಸವಾಲಾಗಿದೆ.
ತರುಣ್ ಬಜಾಜ್
ತರುಣ್ ಬಜಾಜ್, 1988 ಹರಿಯಾಣ ಬ್ಯಾಚ್ ಐಎಎಸ್ ಅಧಿಕಾರಿ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಹಣಕಾಸು ಸಚಿವಾಲಯಕ್ಕೆ ಸೇರುವ ಮೊದಲು, ಬಜಾಜ್ ಪ್ರಧಾನ ಮಂತ್ರಿ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಇಲ್ಲಿ ಕೆಲಸ ಮಾಡುವಾಗ, ಅವರು ದೇಶಕ್ಕಾಗಿ ಅನೇಕ ಪರಿಹಾರ ಪ್ಯಾಕೇಜ್ಗಳಲ್ಲಿ ಕೆಲಸ ಮಾಡಿದ್ದಾರೆ. ಮೂರು ಸ್ವಾವಲಂಬಿ ಭಾರತ ಪ್ಯಾಕೇಜ್ಗಳನ್ನು ರೂಪಿಸುವಲ್ಲಿ ತರುಣ್ ಬಜಾಜ್ ಪಾತ್ರವು ಬಹಳ ಮಹತ್ವದ್ದಾಗಿದೆ.
ಇದನ್ನೂ ಓದಿ: Survey: ಈ ಬಾರಿ ಬಜೆಟ್ ಮೇಲೆ Work From Home ಉದ್ಯೋಗಿಗಳ ನಿರೀಕ್ಷೆಗಳೇನು? ಹೊಸ ಯೋಜನೆಗಳು ಘೋಷಣೆ ಆಗುತ್ತಾ?
ಅಜಯ್ ಸೇಠ್
ಹಣಕಾಸು ಸಚಿವಾಲಯದಲ್ಲಿ ಹೊಸ ಸದಸ್ಯರಾಗಿದ್ದರೂ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಪೋಸ್ಟ್ ಮಾಡಲಾದ ಅಜಯ್ ಸೇಠ್, ಬಂಡವಾಳ ಮಾರುಕಟ್ಟೆಗಳು, ಹೂಡಿಕೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ನೀತಿಗಳಿಗೆ ಡಿಇಎ ನೋಡಲ್ ಇಲಾಖೆಯಲ್ಲಿದ್ದಾರೆ.
ಅಜಯ್ ಕರ್ನಾಟಕ ಕೇಡರ್ನ 1987 ಬ್ಯಾಚ್ನ ಐಎಎಸ್ ಅಧಿಕಾರಿ. ಭಾರತದ GDP ಬೆಳವಣಿಗೆಯನ್ನು ಉಳಿಸಿಕೊಳ್ಳಲು ಆರ್ಥಿಕತೆಯಲ್ಲಿ ಖಾಸಗಿ ಬಂಡವಾಳ ವೆಚ್ಚವನ್ನು ಪುನರುಜ್ಜೀವನಗೊಳಿಸುವ ಕಷ್ಟಕರವಾದ ಕೆಲಸವನ್ನು ಸೇಠ್ ಹೊಂದಿದ್ದಾರೆ.
ದೇಬಶಿಶ್ ಪಾಂಡಾ
ದೇಬಶಿಶ್ ಪಾಂಡಾ ಅವರು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಪಾಂಡಾ ತಂಡದ ಪ್ರಮುಖ ಭಾಗವೆಂದು ಪರಿಗಣಿಸಬಹುದು ಏಕೆಂದರೆ ಬಜೆಟ್ನಲ್ಲಿ ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ದೊಡ್ಡ ಮತ್ತು ಸಣ್ಣ ಘೋಷಣೆಗಳು ಅವರ ಜವಾಬ್ದಾರಿಯ ಅಡಿಯಲ್ಲಿ ಬರುತ್ತವೆ.
ಪಾಂಡಾ, 1987 ರ ಬ್ಯಾಚ್ ಉತ್ತರ ಪ್ರದೇಶ ಕೇಡರ್ IAS ಅಧಿಕಾರಿಯಾಗಿದ್ದು, ಹಣಕಾಸು ವ್ಯವಸ್ಥೆಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಯೊಂದಿಗೆ ನಿಕಟವಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ.
ತುಹಿನ್ ಕಾಂತ್ ಪಾಂಡೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ತಂಡದಲ್ಲಿ ತುಹಿನ್ ಕಾಂತ್ ಪಾಂಡೆ ಅವರ ಹೆಸರೂ ಸೇರಿದೆ. ತುಹಿನ್ ಕಾಂತ್, 1987 ರ ಬ್ಯಾಚ್ ಒಡಿಶಾ ಕೇಡರ್ ಐಎಎಸ್ ಅಧಿಕಾರಿ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಅವರನ್ನು ಅಕ್ಟೋಬರ್ 2019 ರಲ್ಲಿ DIPAM ನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಇದನ್ನೂ ಓದಿ: Union Budget: ದಶಕಗಳ ಸಂಪ್ರದಾಯಗಳನ್ನ ಬದಲಿಸಿದ ಮೋದಿ ಸರ್ಕಾರ: ಇಲ್ಲಿವೆ ಬದಲಾದ ಬದಲಾವಣೆಗಳು!
ಕೃಷ್ಣಮೂರ್ತಿ ಸುಬ್ರಮಣಿಯನ್
ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಹಣಕಾಸು ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಪ್ರಾಧ್ಯಾಪಕರಾದ ಲಗ್ಗಿ ಜಿಂಗಲ್ಸ್ ಮತ್ತು ರಘುರಾಮ್ ರಾಜನ್ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿದ್ದಾರೆ,
ಸುಬ್ರಮಣಿಯನ್ ಅವರನ್ನು ಡಿಸೆಂಬರ್ 2018 ರಲ್ಲಿ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಮಾಡಲಾಯಿತು. ಅವರನ್ನು ಬ್ಯಾಂಕಿಂಗ್, ಕಾರ್ಪೊರೇಟ್ ಆಡಳಿತ ಮತ್ತು ಆರ್ಥಿಕ ನೀತಿಯ ಮಾಸ್ಟರ್ ಎಂದು ಹೇಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ