ಕೆಲವೊಬ್ಬರಿಗೆ ಕೆಲವೊಂದು ವಿಷಯಗಳಲ್ಲಿ ವಿಶೇಷ ಆಸಕ್ತಿ (Special Interest) ಇರುತ್ತದೆ. ಅವರು ಎಂಥದ್ದೇ ಉದ್ಯೋಗ (Job) ಮಾಡುತ್ತಿದ್ದರೂ ಮನಸ್ಸು ತಮ್ಮ ಆಸಕ್ತಿ ಕ್ಷೇತ್ರದತ್ತ ಎಳೆಯುತ್ತಲೇ ಇರುತ್ತದೆ.28 ವರ್ಷಗಳ ಕಾಲ ಕಾರ್ಪೋರೇಟ್ ಕ್ಷೇತ್ರ (Corporate Field) ದಲ್ಲಿ ಕೆಲಸ ಮಾಡಿದರೂ ಆಂಧ್ರದ ಕೆ ವಿ ಸುಬ್ಬಾರೆಡ್ಡಿ (Kv Subbareddy) ಅವರಿಗೆ ಕೃಷಿಯಲ್ಲಿ ಒಲವು ಕಡಿಮೆಯಾಗಿರಲೇ ಇಲ್ಲ. ಇದು ಕೃಷಿಯಲ್ಲಿ ಅವರ ಸಾಧನೆಗೆ ಕಾರಣವಾಯ್ತು. ಆಂಧ್ರಪ್ರದೇಶ (Andhra Pradesh) ದ ನಂದ್ಯಾಲ್ ಜಿಲ್ಲೆಯ ಕೆ ವಿ ರಾಮ ಸುಬ್ಬಾರೆಡ್ಡಿ ಅವರು ಹಳ್ಳಿಯಲ್ಲಿ ಕೃಷಿ ಮಾಡುವ ಕನಸು ಕಂಡಿದ್ದವರು. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಳ್ಳಿಗೆ ಭೇಟಿ ನೀಡಿದಾಗಲೆಲ್ಲ ಜಮೀನಿಗೂ ಭೇಟಿ ನೀಡುತ್ತಿದ್ದರು.
ತಾವು ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರೂ, ಫಾರ್ಮ್ ಅನ್ನು ಸ್ಥಾಪಿಸಿದ ನಂತರ, ಈ ಸಾಂಪ್ರದಾಯಿಕ ವಿಧಾನಗಳು ಪರಣಾಮಕಾರಿಯಲ್ಲ ಎಂದು ನನಗೆ ಅನ್ನಿಸಿತು.ಹಾಗಾಗಿಯೇ ತಾವು 2017 ರಲ್ಲಿ ಆಧುನಿಕ ರೈತನಾಗುವುದಕ್ಕೋಸ್ಕರ ಕೈತುಂಬಾ ಸಂಬಳ ಸಿಗುತ್ತಿದ್ದ ಉದ್ಯೋಗವನ್ನು ತ್ಯಜಿಸಲು ನಿರ್ಧರಿಸಿದ್ದಾಗಿ ಹೇಳುತ್ತಾರೆ.
ರಾಗಿ ಕೃಷಿಗಾಗಿ 20 ಎಕರೆ ಭೂಮಿ ಖರೀದಿ
2017 ರಲ್ಲಿ, ರೆಡ್ಡಿ ಅವರು ತಮ್ಮ ತೋಟದ ಬಳಿ ರಾಗಿ ಕೃಷಿ ಪ್ರಾರಂಭಿಸಲು 20 ಎಕರೆ ಭೂಮಿಯನ್ನು ಖರೀದಿಸಿದರು. ನಾನು ರಾಗಿ ಆಯ್ಕೆ ಮಾಡಲು ಹಲವಾರು ಕಾರಣಗಳಿವೆ ಎನ್ನುವ ರೆಡ್ಡಿ, ನನ್ನ ತಾಯಿ ರಾಗಿಯ ಹಲವಾರು ಭಕ್ಷ್ಯಗಳನ್ನು ತಯಾರಿಸುತ್ತಿದ್ದರು.
ಇನ್ನು ರಾಗಿ ಬೆಳೆಗೆ ಕೀಟಗಳ ದಾಳಿ ಕಡಿಮೆ. ಹೀಗಾಗಿ ರಾಸಾಯನಿಕಗಳ ಅಗತ್ಯವಿಲ್ಲದೇ ಉತ್ತಮ ಫಸಲು ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೆ, ಭಾರತದ ರಾಗಿ ಮನುಷ್ಯ ಡಾ ಖಾದರ್ ವಲಿ ಅವರ ಕೃತಿಗಳಿಂದ ನಾನು ಹೆಚ್ಚು ಸ್ಫೂರ್ತಿ ಪಡೆದಿರುವುದಾಗಿ 54 ವರ್ಷ ವಯಸ್ಸಿನ ರೆಡ್ಡಿ ಹೇಳುತ್ತಾರೆ.
ರಾಗಿ ಉತ್ಪನ್ನಗಳಿಂದ 1.7 ಕೋಟಿ ವಹಿವಾಟು
ರೆಡ್ಡಿಯವರು ರಾಗಿ ಸಂಸ್ಕರಣಾ ಕಾರ್ಖಾನೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಅಗ್ರೋ ಕಂಪನಿಯನ್ನು ಸ್ಥಾಪಿಸಲು ನಿರ್ಧರಿಸಿದರು. ಈ ಮೂಲಕ, ರಾಗಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದ್ದಾರೆ.
2018 ರಲ್ಲಿ, ರೆನಾಡು ಮತ್ತು ಮಿಬಲ್ಸ್ ಎಂಬ ಎರಡು ಬ್ರಾಂಡ್ಗಳನ್ನು ಹುಟ್ಟುಹಾಕಿದರು. ಕಳೆದ ವರ್ಷದಲ್ಲಿ ಎರಡೂ ಬ್ರಾಂಡ್ಗಳ ವಹಿವಾಟು ಸುಮಾರು 1.7 ಕೋಟಿ ರೂ. ಈ ವರ್ಷ ಅದನ್ನು ದ್ವಿಗುಣಗೊಳಿಸುವ ನಿರೀಕ್ಷೆಯಲ್ಲಿರುವುದಾಗಿ ರೆಡ್ಡಿ ಅವರು ಹೇಳುತ್ತಾರೆ.ಇನ್ನು ಅವರು ತಮ್ಮ 60 ಎಕರೆ ಜಮೀನಿನಲ್ಲಿ ಫಸಲು ಸಂಗ್ರಹಿಸುವುದರ ಜೊತೆಗೆ, ರಾಜ್ಯದ ಸುಮಾರು 20 ರೈತರೊಂದಿಗೆ ಒಪ್ಪಂದ ಮಾಡಿಕೊಂಡರು. ಅವರ ಉತ್ಪನ್ನಗಳನ್ನು ಬಿತ್ತನೆ ಸಮಯದಲ್ಲಿ ನಿಗದಿಪಡಿಸಿದ ದರಕ್ಕೆ ರಾಗಿ ಖರೀದಿಸಿದರು.
"ಯಾವುದೇ ಮಧ್ಯವರ್ತಿಗಳು ಈ ವ್ಯವಹಾರದಲ್ಲಿ ಭಾಗಿಯಾಗಿಲ್ಲವಾದ್ದರಿಂದ, ರೈತರು ನ್ಯಾಯಯುತ ಬೆಲೆಯನ್ನು ಪಡೆಯುತ್ತಾರೆ ಎಂದು ರೆಡ್ಡಿ ಅಭಿಪ್ರಾಯ ಪಡುತ್ತಾರೆ.
ಇದನ್ನೂ ಓದಿ: ಸಿಎ ಪರೀಕ್ಷೆಯಲ್ಲಿ ಫೇಲ್, ಸಂಪಾದಿಸೋದ್ರಲ್ಲಿ ಟಾಪ್ ಕ್ಲಾಸ್! ಇವ್ರು ಕೋಟಿ ಒಡೆಯರು ರೀ
ರಾಗಿ ಮನುಷ್ಯ ಎಂದೇ ಚಿರಪರಿಚಿತ!
ಇನ್ನು ಸಾಂಕ್ರಾಮಿಕ ಕೋವಿಡ್ ಸಮಯದಲ್ಲಿ ನಾವು ನಮ್ಮ ರೆಡಿ-ಟು-ಈಟ್ ಸ್ಟೋರ್ಗೆ ರಾಗಿ ಲಾಡು, ಮುರುಕು, ಬಿಸ್ಕತ್ತುಗಳು ಮತ್ತು ಮಿಶ್ರಣವನ್ನು ಒಳಗೊಂಡಂತೆ ಹೊಸ ವಸ್ತುಗಳನ್ನು ಪರಿಚಯಿಸಿದೆವು.
ಇವು ಎಲ್ಲವೂ ಅಂಟು ಮತ್ತು ಸಕ್ಕರೆ ಮುಕ್ತವಾಗಿವೆ. ನನ್ನ ಪತ್ನಿ ಹಾಗೂ ತಾಯಿ ಪಾಕವಿಧಾನಗಳನ್ನು ನೋಡಿಕೊಳ್ಳುತ್ತಾರೆ. ಇದು ಜನರು ತಮ್ಮ ದೈನಂದಿನ ಆಹಾರದಲ್ಲಿ ರಾಗಿಯನ್ನು ಸೇವಿಸಲು ಪ್ರೇರೇಪಿಸುತ್ತದೆ ಎಂಬುದಾಗಿ ಅವರು ಹೇಳುತ್ತಾರೆ. ಹಾಗಾಗಿಯೇ ಸ್ಥಳೀಯವಾಗಿ ರೆಡ್ಡಿಯವರು ‘ರಾಗಿ ಮನುಷ್ಯ’ ಎಂದೇ ಚಿರಪರಿಚಿತರಾಗಿದ್ದಾರೆ. ಇನ್ನು, “ನನ್ನ ಕಂಪನಿಯ ಇತರ ಪ್ರಮುಖ ಉತ್ಪನ್ನಗಳೆಂದರೆ ಧಾನ್ಯಗಳು, ಇಡ್ಲಿ ರವಾ, ಉಪ್ಮಾ ರವಾ, ಫಾಕ್ಸ್ಟೈಲ್ ರಾಗಿ, ಬಾರ್ನಾರ್ಡ್ ರಾಗಿ, ಬ್ರೌನ್ ಟಾಪ್ ರಾಗಿ, ಕೊಡೋ ರಾಗಿ, ಸೋರ್ಗಮ್ ರಾಗಿ ಮುಂತಾದವು.‘
ಕಾಂಬೋ ಪ್ಯಾಕ್ ಬೆಲೆ 80 ರೂಪಾಯಿಯಿಂದ ಶುರು!
ಈ ಕಾಂಬೊ ಪ್ಯಾಕ್ಗಳ ಬೆಲೆ 80 ರಿಂದ 800 ರೂಗಳಾಗಿವೆ. ಅಲ್ಲದೇ ಈ ಎಲ್ಲಾ ಉತ್ಪನ್ನಗಳು ಅವರ ಅಧಿಕೃತ ವೆಬ್ಸೈಟ್ಗಳು ಮತ್ತು Amazon, Indiamart ಸೇರಿದಂತೆ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.
ಹೈದರಾಬಾದ್ ಮತ್ತು ನಂದ್ಯಾಲ್ನಲ್ಲಿರುವ ಅವರ ಎರಡು ಮಳಿಗೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ” ಎಂದು ರೆಡ್ಡಿ ಹೇಳುತ್ತಾರೆ. ಮುಂಬರುವ ವರ್ಷದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ಗಳನ್ನು ಬಿಡುಗಡೆ ಮಾಡಲು ಯೋಜಿಸಿರುವುದಾಗಿ ರೆಡ್ಡಿ ಹೇಳುತ್ತಾರೆ.
ಇದನ್ನೂ ಓದಿ: ಇನ್ಮುಂದೆ ಏನಿದ್ರೂ ಎಲೆಕ್ಟ್ರಿಕ್ ಗಾಡಿಗಳದ್ದೇ ಅಬ್ಬರ, ಇದೇ ಭಾರತದ ಭವಿಷ್ಯವಂತೆ!
ಇನ್ನು, ರೆಡ್ಡಿ ಅವರು ANGRAU-RARS ನಂದ್ಯಾಲ್ನಿಂದ ‘ಅತ್ಯುತ್ತಮ ಪ್ರಗತಿಪರ ರೈತ’ ಪ್ರಶಸ್ತಿ ಹಾಗೂ ದೇಶದಾದ್ಯಂತ ದೊಡ್ಡ ಪ್ರಮಾಣದ ರಾಗಿ ಉತ್ಪಾದನೆ ಮತ್ತು ಪೂರೈಕೆಗಾಗಿ ಹೈದರಾಬಾದ್ನ ICAR-IIMR ನಿಂದ ‘ಅತ್ಯುತ್ತಮ ಆರಂಭಿಕ ರೈತರ ಸಂಪರ್ಕ’ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ