ಬದಲಾವಣೆ (Change) ಜಗದ ನಿಯಮ. ಬದಲಾವಣೆ ಅನ್ನುವ ಪದವೊಂದು ಬಿಟ್ಟು ಉಳಿದೆಲ್ಲವೂ ಬದಲಾಗುತ್ತೆ. ಭಾರತ ದೇಶಕ್ಕೆ ಸ್ವಾತಂತ್ರ್ಯ (Freedom) ಬಂದು 75 ವರ್ಷಗಳಾಗಿದ್ದು, ಅಂದಿನಿಂದ ಭಾರತ (India) ಹಲವು ಬದಲಾವಣೆಗಳನ್ನು ಕಂಡಿದೆ. ಈ ಬದಲಾವಣೆಗಳು ಸರಕುಗಳ (Goods) ಬೆಲೆಯಲ್ಲಿ ಹೆಚ್ಚಳವನ್ನು ಒಳಗೊಂಡಿವೆ. 1947 ಮತ್ತು ಇಂದಿನ ಬೆಲೆಗಳಿಗೆ ಹೋಲಿಸಿದರೆ, ಹಳೆಯ ಬೆಲೆ (Old Price) ಗಳು ನಂಬಲಾಗದಂತಿವೆ. ನಿಜಕ್ಕೂ ಆಗ ಈ ಬೆಲೆಯಲ್ಲಿ ಎಲ್ಲವೂ ಸಿಗುತ್ತಿತ್ತಾ ಎಂದು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತೀರಾ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ದೇಶ ಹಲವು ಏರಿಳಿತಗಳನ್ನು ಕಂಡಿತು. ಭಾರತ ವಿಜ್ಞಾನ (Science) ಕ್ಷೇತ್ರದಲ್ಲಿ ಅಗಾಧ ಪ್ರಗತಿ ಸಾಧಿಸಿದೆ. ಇದರೊಂದಿಗೆ ಹೊಸ ಆರ್ಥಿಕ ಶಕ್ತಿಯೂ ಹುಟ್ಟಿಕೊಂಡಿತು.
ಆರ್ಥಿಕವಾಗಿ ಬಲಿಷ್ಠವಾಗಿದೆ ಭಾರತ ದೇಶ!
ಭಾರತ ಇಂದು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಒಂದೆಡೆ ಇಡೀ ವಿಶ್ವ ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿದ್ದರೆ, ಇನ್ನೊಂದೆಡೆ ಭಾರತ ಇದರಿಂದ ಮುಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಹಣದುಬ್ಬರವೂ ಹೆಚ್ಚಾಗಿದೆ. ಜೊತೆಗೆ ಅನೇಕ ಸರಕು ಮತ್ತು ಸೇವೆಗಳ ಹಳೆಯ ಬೆಲೆಗಳು ಇಂದು ಕನಸಿನಂತೆ ಕಾಣುತ್ತಿವೆ. 1947 ಮತ್ತು 2022 ರ ನಡುವಿನ ಕೆಲವು ಸರಕುಗಳ ಬೆಲೆಗಳನ್ನು ಹೋಲಿಕೆ ಮಾಡಿ, ಇದರಲ್ಲಿರುವ ಹಳೆಯ ಬೆಲೆಗಳನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಅಂದು ಮತ್ತು ಇಂದಿನ ನಡುವೆ ಬೆಲೆಗಳು ಎಷ್ಟು ಬದಲಾಗಿವೆ?
1947ರಲ್ಲಿ ಒಂದು ಕೆಜಿ ಅಕ್ಕಿಗೆ 12 ಪೈಸೆ ಸಿಗುತ್ತಿತ್ತು, ಇಂದು ಒಂದು ಕೆಜಿಗೆ 40 ರೂಪಾಯಿಗೆ ಮಾರಾಟವಾಗುತ್ತಿದೆ. ಅಲ್ಲದೆ ಸಕ್ಕರೆ ಅಂದು ಕೆ.ಜಿ.ಗೆ 40 ಪೈಸೆ ಇತ್ತು, ಇಂದು ಕೆಜಿಗೆ 42 ರೂಪಾಯಿ. ಒಂದು ಆಲೂಗೆಡ್ಡೆ 25 ಪೈಸೆಯಿಂದ 25 ರೂಪಾಯಿಗೆ ಬಂದಿದೆ. ಹಾಲು ಲೀಟರ್ಗೆ 12 ಪೈಸೆಯಿಂದ 60 ರೂಪಾಯಿಗೆ ಏರಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ಗೆ ರೂಪಾಯಿ ಇದೆ. ಆದರೆ 1947ರಲ್ಲಿ ಕೇವಲ 25 ಪೈಸೆಗೆ ಲೀಟರ್ ಪೆಟ್ರೋಲ್ ಸಿಗುತ್ತಿತ್ತು.
ಇದನ್ನೂ ಓದಿ: ಹೂಡಿಕೆದಾರರ ಮೇಲೆ ಹಣದ ಸುರಿಮಳೆಗೈದ ಟಾಪ್ 5 ಷೇರುಗಳಿವು! ನೀವೂ ಇನ್ವೆಸ್ಟ್ ಮಾಡಿದ್ದೀರಾ?
ಇಂದು 8,000 ರೂಪಾಯಿ ಇರುವ ಸೈಕಲ್ 1947 ರಲ್ಲಿ ಕೇವಲ 20 ರೂಪಾಯಿಗೆ ದೊರೆಯುತ್ತಿತ್ತು. ವಿಮಾನದಲ್ಲಿ ಕೇವಲ 140 ರೂಪಾಯಿ ಖರ್ಚು ಮಾಡಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸಬಹುದು. ಆದರೆ, ಈಗ ಇದಕ್ಕಾಗಿ ಸುಮಾರು 7 ಸಾವಿರ ರೂಪಾಯಿ ಖರ್ಚು ಮಾಡಬೇಕು. ಅದೇ ರೀತಿ ಹಣದುಬ್ಬರದ ವಿರುದ್ಧ ಹೋರಾಡುವ ಅಸ್ತ್ರವಾದ ಚಿನ್ನದ ಬೆಲೆ 1947ರಲ್ಲಿ 10 ಗ್ರಾಂಗೆ 88 ರೂಪಾಯಿ ಇತ್ತು. ಇಂದು ಅದೇ ಚಿನ್ನ 52 ಸಾವಿರ ರೂಪಾಯಿ ತಲುಪಿದೆ.
ದೇಶದಾದ್ಯಂತ 75ನೇ ಸ್ವಾತಂತ್ರೋತ್ಸವದ ಸಂಭ್ರಮ!
ಭಾರತವು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 15 ರಂದು ಆಚರಿಸುತ್ತಿದೆ. ಅದರ ಸ್ಮರಣಾರ್ಥ ಸರ್ಕಾರ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಯೋಜಿಸಿದೆ. ಇದರ ಅಡಿಯಲ್ಲಿ ಸರ್ಕಾರವು 'ಗ್ರೋಗರಿ ತ್ರಿವರ್ಣ' ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಆಗಸ್ಟ್ 15 ರೊಳಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸಿದೆ.
ಇದನ್ನೂ ಓದಿ: ಶ್ರೀನಗರದ ಲಾಲ್ಚೌಕ್ನಲ್ಲಿ ಮೊಳಗಿದ ವಂದೇ ಮಾತರಂ, ಭಯೋತ್ಪಾದಕರಿಗೆ ತಕ್ಕ ಉತ್ತರ!
ಇದಕ್ಕಾಗಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಕೆಲವು ನಿಯಮಗಳಿಗೂ ಕೇಂದ್ರ ತಿದ್ದುಪಡಿ ತಂದಿದೆ. ಇದೇ ವೇಳೆ ಪೊಲೀಸ್ ಮತ್ತು ಅರೆಸೇನಾ ಪಡೆಗಳಿಗೆ ವಿಶೇಷ ಪದಕ ನೀಡಿ ಗೌರವಿಸಲಾಗಿದೆ. ಈ ಪದಕದ ಹೆಸರು ಸ್ವಾತಂತ್ರ್ಯ ವಾರ್ಷಿಕೋತ್ಸವದ ಪದಕ ಇದನ್ನು ಅಧ್ಯಕ್ಷ ದ್ರೌಪದಿ ಮುರ್ಮು ಘೋಷಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ