ಭಾರತ (India) ಸರ್ಕಾರ ಜನಸಾಮಾನ್ಯರಿಗೆಂದೇ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಆದರೆ, ಎಲ್ಲ ಯೋಜನೆ (Scheme) ಬಗ್ಗೆ ಎಲ್ಲರಿಗೂ ತಿಳಿದಿರುವುದು ಬಹಳ ಕಡಿಮೆ. ಆರೋಗ್ಯ ವಿಮಾ (Health Insurance) ಯೋಜನೆಗಳ ಪ್ರಯೋಜನಗಳ ಕುರಿತು ಕೇಂದ್ರ ಸರ್ಕಾರ (Central Governamnet)ಮಹತ್ವದ ಘೋಷಣೆ ಮಾಡಿದೆ. ಏಕೀಕೃತ ಕಾರ್ಡ್ (One Card) ಮಾಡುವ ಯೋಜನೆಯನ್ನು ಬುಧವಾರ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ಆಯುಷ್ಮಾನ್ ಭಾರತ್ (Ayushman Bharat Yojana)-ಪಿಎಂಜೆಎವೈ ಮತ್ತು ರಾಜ್ಯ ಸರ್ಕಾರಗಳು ನಡೆಸುವ ವೈಯಕ್ತಿಕ ಆರೋಗ್ಯ ವಿಮಾ ಯೋಜನೆಗಳನ್ನು ಪಡೆಯಲು ಇದನ್ನು ಬಳಸಬಹುದು. HT ವರದಿಗಳ ಪ್ರಕಾರ, ಜನರಲ್ಲಿ ಗೊಂದಲವನ್ನು ಕಡಿಮೆ ಮಾಡಲು ಸರ್ಕಾರವು ಈ ಕ್ರಮವನ್ನು ತೆಗೆದುಕೊಂಡಿದೆ.
ಗೊಂದಲ ಕಡಿಮೆ ಮಾಡಲು ಈ ಕ್ರಮ!
ಜನರಿಗೆ ಯಾವ ಯೋಜನೆಗಳು ಅನ್ವಯವಾಗುತ್ತವೆ ಎಂಬುದು ಸಾಮಾನ್ಯವಾಗಿ ತಿಳಿದಿರುವುದಿಲ್ಲ. ಆರೋಗ್ಯ ಸಚಿವಾಲಯದ ಪ್ರಕಾರ, ಪ್ರಸ್ತುತ ಹಲವಾರು ರಾಜ್ಯಗಳಲ್ಲಿ ಸುಮಾರು 20 ಯೋಜನೆಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಒಂದೇ ಕಾರ್ಡ್ನಲ್ಲಿ ಮಾಹಿತಿ ನೀಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ಕಾರ್ಡ್ ಕುರಿತು ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, "ಇದು ಏಕೀಕೃತ ಕಾರ್ಡ್ ಆಗಿದ್ದು, ಆಯುಷ್ಮಾನ್ ಕಾರ್ಡ್ ಎಂದು ಕರೆಯಲಾಗುವುದು" ಎಂದು ಹೇಳಿದ್ದಾರೆ. ಇದರ ಮೂಲಕ ಜನರು ಕೇವಲ ಒಂದು ಕಾರ್ಡ್ ಬಳಸಿ ಕೇಂದ್ರ ಮತ್ತು ರಾಜ್ಯ-ಚಾಲಿತ ಆರೋಗ್ಯ ವಿಮಾ ಯೋಜನೆಗಳ ಅಡಿಯಲ್ಲಿ ಚಿಕಿತ್ಸಾ ಪ್ಯಾಕೇಜ್ಗಳನ್ನು ಪ್ರವೇಶಿಸಬಹುದು.
ಆಯುಷ್ಮಾನ್ ಕಾರ್ಡ್ನಲ್ಲಿರಲಿದೆ ಎಲ್ಲಾ ಮಾಹಿತಿ!
ಅನೇಕ ರಾಜ್ಯಗಳು ತಮ್ಮದೇ ಆದ ಆರೋಗ್ಯ ವಿಮಾ ಯೋಜನೆಗಳನ್ನು ಹೊಂದಿವೆ. ಪಟ್ಟಿ ಮಾಡಲಾದ ಆಸ್ಪತ್ರೆಗಳು, ನೆರವು ಏಜೆನ್ಸಿಗಳು, ವಿಮಾ ಕಂಪನಿಗಳು ಮತ್ತು ಮೂರನೇ ವ್ಯಕ್ತಿಯ ನಿರ್ವಾಹಕರ ಬಗ್ಗೆ ಫಲಾನುಭವಿಗಳಲ್ಲಿ ಸಾಕಷ್ಟು ಗೊಂದಲಗಳಿವೆ ಎಂದು ಅವರು ಹೇಳಿದರು. ಈಗ ಸಾಮಾನ್ಯ ಹೆಸರು 'ಆಯುಷ್ಮಾನ್ ಕಾರ್ಡ್' ಆಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಲೋಗೋಗಳನ್ನು ಹೊಂದಿರುವ ಹೊಸ ಕಾರ್ಡ್ಗಳನ್ನು ತಯಾರಿಸಲು ಸರ್ಕಾರ ಪ್ರಕ್ರಿಯೆಯಲ್ಲಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಬಗ್ಗೆ ಬಿಗ್ ಅಪ್ಡೇಟ್! ಸೆಪ್ಟೆಂಬರ್ 1 ರಿಂದ ಹೊಸ ನಿಯಮ ಜಾರಿ
ಈ ಹೊಸ ವ್ಯವಸ್ಥೆಯಲ್ಲಿ, ಯಾವುದೇ ಸರ್ಕಾರಿ ವಿಮಾ ಯೋಜನೆಗೆ ಅರ್ಹರಾಗಿರುವ ಜನರು ಕೇಂದ್ರ ಯೋಜನೆಯಡಿ ಒಳಗೊಂಡಿರುವ 25,000 ಆಸ್ಪತ್ರೆಗಳಲ್ಲಿ ಯಾವುದಾದರೂ ಕವರೇಜ್ ಪಡೆಯಬಹುದು. ಹೊಸ ಬದಲಾವಣೆಗಳನ್ನು ಜಾರಿಗೆ ತರಲು ರಾಜ್ಯಗಳು ಕಾನೂನುಬದ್ಧವಾಗಿ ಬದ್ಧವಾಗಿಲ್ಲವಾದರೂ, ದೆಹಲಿ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳು ಅವುಗಳನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡಿವೆ.
ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಮಾತನಾಡಿ, ಈ ಯೋಜನೆಯಡಿ ಕೇಂದ್ರ ಸರ್ಕಾರ 5 ಲಕ್ಷ ರೂಪಾಯಿ ವಿಮೆ ನೀಡಲಿದೆ. ಅದೇ ಸಮಯದಲ್ಲಿ, ಯೋಜನೆಗೆ ಒಪ್ಪುವ ರಾಜ್ಯಗಳು ಸಹ ವಿಮಾ ಪ್ಯಾಕೇಜ್ಗೆ ಮೊತ್ತವನ್ನು ಸೇರಿಸಲು ಮುಕ್ತವಾಗಿರುತ್ತವೆ.
ಇದನ್ನೂ ಓದಿ: ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಖಾತೆಗೆ ಹಣ ಹಾಕುತ್ತೆ ಮೋದಿ ಸರ್ಕಾರ
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಬಿ-ಎಆರ್ಕೆ ಕಾರ್ಡ್ ಅನ್ನು ಸಾವರ್ಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10/- ಶುಲ್ಕದೊಂದಿಗೆ ನೀಡಲಾಗುತ್ತದೆ. ಬೆಂಗಳೂರು ಒನ್ ಕರ್ನಾಟಕ ಒನ್ ಮತ್ತು ಸೇವ ಸೀಂಧು ಕೇಂದ್ರಗಳಲ್ಲಿ ರೂ. 35/- ಶುಲ್ಕದೊಂದಿಗೆ ಎಬಿ-ಎಆರ್ಕೆ ಕಾರ್ಡ್ ನೀಡಲಾಗುತ್ತದೆ. ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ಗಳನ್ನು ಹಾಜರು ಪಡಿಸಿ ಆರೋಗ್ಯ ಕಾರ್ಡ್ ಪಡೆಯಬಹುದು. ಈ ಕಾರ್ಡಿನ ಮೂಲಕ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ