Bengaluru Airport: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕೇ? ನಿಮಗೊಂದು ಶುಭ ಸುದ್ದಿಯಿದೆ!

ಬೆಂಗಳೂರು ವಿಮಾನ ನಿಲ್ದಾಣ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು ವಿಮಾನ ನಿಲ್ದಾಣ (ಪ್ರಾತಿನಿಧಿಕ ಚಿತ್ರ)

ಈಗ ನೀವು ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ್ ನಿಲ್ದಾಣಕ್ಕೆ ಸುಲಭವಾಗಿ ಮತ್ತು ತ್ವರಿತವಾಗಿ ತಲುಪಲು ಬೆಂಗಳೂರು ರೈಲ್ವೆ ವಿಭಾಗ ಹೆಚ್ಚಿನ ರೈಲುಗಳನ್ನು ಬಿಡಲು ತೀರ್ಮಾನಿಸಿದೆ. 

  • Share this:

    ಬೆಂಗಳೂರು: ನೀವು ಬೆಂಗಳೂರಿನ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣವನ್ನು (Kempegowda International Airport) ತಲುಪಲು ಪರದಾಡುತ್ತಿದ್ದೀರಾ? ರಸ್ತೆ ಮಧ್ಯೆ ಟ್ರಾಫಿಕ್  (Traffic) ಕಿರಿಕಿರಿಯಿಂದ ಬೇಸತ್ತಿದ್ದೀರಾ? ಈಗ ಈ ಎಲ್ಲಾ ಸಮಸ್ಯೆಗೆ ಗುಡ್ ಬೈ ಹೇಳಿ. ಈಗ ನೀವು ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ್ ನಿಲ್ದಾಣಕ್ಕೆ ಸುಲಭವಾಗಿ ಮತ್ತು ತ್ವರಿತವಾಗಿ ತಲುಪಲು ಬೆಂಗಳೂರು ರೈಲ್ವೆ ವಿಭಾಗ ಹೆಚ್ಚಿನ ರೈಲುಗಳನ್ನು ಬಿಡಲು ತೀರ್ಮಾನಿಸಿದೆ.  ಬೆಳ್ಳಂದೂರು ಬಳಿಯ ರೈಲು ಮೇಲ್ಸೇತುವೆ ಕಾಮಗಾರಿಯನ್ನು ಚುರುಕುಗೊಳಿಸಲು ನಿರ್ಧರಿಸಿದೆ . ಸಂಸದ ಪಿ. ಸಿ. ಮೋಹನ್ ( P.C. Mohan) ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದು, ಅದಕ್ಕೆ ಹೆಚ್ಚಿನ ರೈಲು ಸೇವೆ ಒದಗಿಸುವುದಾಗಿ ರೈಲ್ವೆ ಇಲಾಖೆ ಕೂಡ ಭರವಸೆ ನೀಡಿದೆ. 


    ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂಸದ ಪಿ. ಸಿ. ಮೋಹನ್ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಲು ಇನ್ನಷ್ಟು ರೈಲುಗಳ ಸೇವೆ ಅಗತ್ಯವಿದೆ. ಹೀಗಾಗಿ ವಿಮಾನ ನಿಲ್ದಾಣದ ಆಡಳಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ರೈಲುಗಳನ್ನು ಬಿಡಿ ಎಂದು ತಿಳಿಸಿದ್ದಾರೆ.


    ಕಾರ್ಮೆಲ್ರಾಮ್ ಮತ್ತು ಬೆಳ್ಳಂದೂರು ಮೇಲ್ಸೇತುವೆ ಕಾಮಗಾರಿ ಬಗ್ಗೆ ಮಾಹಿತಿ
    ಇನ್ನು ಕಾರ್ಮೆಲ್ರಾಮ್ ಮತ್ತು ಬೆಳ್ಳಂದೂರು ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಅತೀ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಸುಮಾರು 48.16 ಕೋಟಿ ವೆಚ್ಚದಲ್ಲಿ ನಡೆಯುವ ಈ ಕಾಮಗಾರಿಗೆ, ಈ ತಿಂಗಳ ಕೊನೆಯಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಇದೇ ವೇಳೆ ಸಂಸದ ಪಿ. ಸಿ. ಮೋಹನ್ ಅವರಿಗೆ ಮಾಹಿತಿ ನೀಡಿದರು. ಇನ್ನು ಈ ಮೇಲ್ಸೇತುವೆ ನಿರ್ಮಾಣಕ್ಕೆ ಸುಮಾರು 2,465 ಚ.ಮಿ. ಜಮೀನಿನ ಅಗತ್ಯವಿದ್ದು, ಈ ಬಗ್ಗೆ ಬಿಬಿಎಂಪಿಯೊಂದಿಗೆ ಚರ್ಚಿಸಿ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು ಇತ್ತೀಚಿಗೆ ಅಧಿಕಾರಿಗಳು ತಿಳಿಸಿದ್ದಾರೆ.


    ಇದನ್ನೂ ಓದಿ: Metro Pass: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; BMRCLನಿಂದ 5 ದಿನಗಳ ಪಾಸ್ ಬಿಡುಗಡೆ


    ಕಾಮಗಾರಿಗೆ ಸಹಕರಿಸಲು ಬಿಬಿಎಂಪಿಗೆ ಸೂಚಿಸುವುದಾಗಿ ಭರವಸೆ
    ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಕಿಶೋರ್, ಡಿಆರ್ ಡಿಆರ್ ಎಮ್  ಶ್ಯಾಮ್ ಸಿಂಗ್, ಹೆಚ್ ಎಸ್ ವರ್ಮಾ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಂಸದ ಪಿ. ಸಿ. ಮೋಹನ ಅವರು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ನಾನು ಸ್ಥಳೀಯ ಶಾಸಕರು ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಇನ್ನು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಸಾಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಕಾರ ನೀಡುವಂತೆ ಸರಕಾರ, ಬಿಬಿಎಂಪಿ ಹಾಗೂ ಬೆಸ್ಕಾಂಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.


    Kempegowda International Airport Bengaluru ವಿಮಾನ ನಿಲ್ದಾಣಕ್ಕೆ ಹೀಗೆ ಹೋಗಬಹುದು (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]


    ಪ್ರಯಾಣಿಕರಿಗೆ ಸಿಗಲಿದೆ ಟ್ರಾಫಿಕ್​ನಿಂದ ಮುಕ್ತಿ
    ಹೌದು ಈಗಾಗಲೇ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಲುಪಲು ಪ್ರಯಾಣಿಕರು ಟ್ರಾಫಿಕ್​ನಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.  ಆದ್ರೆ ಇತ್ತೀಚಿಗೆ ನಡೆದ ಸಭೆಯಲ್ಲಿ ನೈಋತ್ಯ ರೈಲ್ವೆ ಅಧಿಕಾರಿಗಳು ಹೆಚ್ಚಿನ ರೈಲು ಸೇವೆ ಒದಗಿಸಲು ತೆಗೆದುಕೊಂಡ ತೀರ್ಮಾನ ಪ್ರಯಾಣಿಕರಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಕಾರ್ಮೆಲ್ರಾಮ್ ಮತ್ತು ಬೆಳ್ಳಂದೂರು ಮೇಲ್ಸೇತುವೆ ಪ್ರಾರಂಭವಾದ್ರೆ ಪ್ರಯಾಣಿಕರಿಗೆ ಮತಷ್ಟು ಅನೂಕಲವಾಗುತ್ತದೆ ಅಂತಾರೆ ಪ್ರಯಾಣಿಕರು.


    ಇದನ್ನೂ ಓದಿ: Women Reservation Karnataka: ಮಹಿಳೆಯರಿಗೆ ಬಂಪರ್! ಸರ್ಕಾರಿ ಹೊರಗುತ್ತಿಗೆ ಕೆಲಸಗಳಲ್ಲೂ ಮಹಿಳಾ ಉದ್ಯೋಗಿಗಳಿಗೆ ಶೇ. 33 ಮೀಸಲಾತಿ ಘೋಷಣೆ


    ಒಟ್ಟಿನಲ್ಲಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ರೈಲು ಸೇವೆ ಒದಗಿಸಲು ಸಂಸದ ಪಿ. ಸಿ. ಮೋಹನ್ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅದರಂತೆ ರೈಲ್ವೆ ಅಧಿಕಾರಿಗಳು ಕೂಡ ರೈಲು ಸೇವೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದು, ಈಗ ಬೆಂಗಳೂರು ಸಿಟಿನಿಂದ  ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ತುಂಬ ಖುಷಿ ತಂದಿದೆ ಎಂದೆ ಹೇಳಬಹುದು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು