Karnataka Budget 2023: ಹೆದ್ದಾರಿ ಅಭಿವೃದ್ಧಿಗೆ ಸಾವಿರಾರು ಕೋಟಿ! ರಾಜ್ಯದ ಈ ಊರುಗಳಿಗೆ ಹೊಸ ಹೈವೇ

ಹೆದ್ದಾರಿ (ಸಾಂದರ್ಭಿಕ ಚಿತ್ರ)

ಹೆದ್ದಾರಿ (ಸಾಂದರ್ಭಿಕ ಚಿತ್ರ)

Bengaluru Mysuru Expressway: ಬಲು ಕುತೂಹಲ ಹುಟ್ಟಿಸಿರುವ ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​ ವೇಯನ್ನು 5,486 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

    ಬೆಂಗಳೂರು: 2014ರ ನಂತರ ಇಲ್ಲಿಯವರೆಗೆ ಕರ್ನಾಟಕದಲ್ಲಿ 64,512 ಕೋಟಿ ಹಣದಲ್ಲಿ 6,715 ಕಿಲೊ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ವೆಚ್ಚದಲ್ಲಿ 3084 ಕಿ.ಮೀ ಹೆದ್ದಾರಿ ಅಭಿವೃದ್ಧಿಗೆ (Highway Development) ಯೋಜನೆ ರೂಪಿಸಲಾಗಿದೆ. ಈ ಎಲ್ಲ ಅಂಶಗಳನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಬಜೆಟ್​ ವೇಳೆ (Karnataka Budget 2023) ತಿಳಿಸಿದ್ದಾರೆ. 


    ಬಲು ಕುತೂಹಲ ಹುಟ್ಟಿಸಿರುವ ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​ ವೇಯನ್ನು 5,486 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು ರಾಮನಗರ ಮಂಡ್ಯ ಮೈಸೂರು ಹೆದ್ದಾರಿಗೆ 8,408 ಕೋಟಿ ಅನುದಾನ ನೀಡಲಾಗಿದೆ. ಸೂರತ್-ಚೆನ್ನೈ ಎಕ್ಸ್​ಪ್ರೆಸ್​ವೇಗೆ 4,544 ಕೋಟಿ ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.


    ಉತ್ತರ ಕರ್ನಾಟಕದ ಊರುಗಳಿಗೂ ಬಂಪರ್ ಕೊಡುಗೆ
    ಹುಬ್ಬಳ್ಳಿ-ಧಾರವಾಡ 6 ಪಥಗಳ ಹೆದ್ದಾರಿಗೆ 1,200 ಕೋಟಿ ಅನುದಾನ ನೀಡಲಾಗಿದೆ. ಜೊತೆಗೆ ಹುಬ್ಬಳ್ಳಿ-ಹೊಸಪೇಟೆ-ಬಳ್ಳಾರಿ- ಆಂಧ್ರ ಗಡಿ ಹೆದ್ದಾರಿಗೆ 2,200 ಕೋಟಿ ಅನುದಾನ ನೀಡಲಾಗಿದೆ.




    ಚಿತ್ರದುರ್ಗಕ್ಕೆ ಮತ್ತು ಮೈಸೂರಿನ ಹೆದ್ದಾರಿಗೆ ಇಷ್ಟು ಅನುದಾನ
    ಚಿತ್ರದುರ್ಗ-ದಾವಣಗೆರೆ-ಹಾವೇರಿ 6 ಪಥದ ಹೆದ್ದಾರಿಗೆ 2,611 ಕೋಟಿ ಅನುದಾನ ನೀಡಲಾಗಿದೆ. ಮೈಸೂರು-ಕುಶಾಲನಗರ 92 ಕಿಲೋ ಮೀಟರ್ ಹೆದ್ದಾರಿ ಅಬಿವೃದ್ಧಿಗೆ 4,128 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.


    ಕಲ್ಯಾಣ ಕರ್ನಾಟಕ ಈ ಹೆದ್ದಾರಿ ಚತುಷ್ಪಥಕ್ಕೆ ಏರಿಕೆ
    ಕಲ್ಯಾಣ ಕರ್ನಾಟಕದ ಪ್ರಮುಖ ಸಂಪರ್ಕ ರಸ್ತೆಯಾದ 411 ಕಿ.ಮೀ. ಉದ್ದದ ಬೀದರ್-ಕಲಬುರಗಿ-ಬಳ್ಳಾರಿ ರಸ್ತೆಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಲಾಗಿದೆ. 


    ಇದನ್ನೂ ಓದಿ:Karnataka Budget 2023-24 Live: ನಿರುದ್ಯೋಗಿಗಳಿಗೆ ಸರ್ಕಾರದಿಂದ ಸಂಬಳ, ಬಜೆಟ್​ನಲ್ಲಿ ಸಿಎಂ ಘೋಷಣೆ


    ಗದಗ ಜಿಲ್ಲೆಗೆ ಏನೆಲ್ಲ ಸಿಕ್ತು?
    ಗದಗ ಜಿಲ್ಲೆಯ ಶಿರಹಟ್ಟಿ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ತಾಲೂಕಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಸುತ್ತಲಿನ ಗ್ರಾಮಗಳ ಬಡ ಜನರಿಗೆ ಉತ್ತಮವಾದ ವೈದ್ಯಕೀಯ ಸೇವೆ ಸಿಗುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಪಿಎಂ-ಅಭಿಂ ಅಡಿಯಲ್ಲಿ ತೃತೀಯ ಹಂತದ ಆರೈಕೆಯನ್ನು ಒದಗಿಸುವ ಸಲುವಾಗಿ ಗದಗ ಆಸ್ಪತ್ರೆಯಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆಗೆ ತೀರ್ಮಾನಿಸಲಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: