ಬೆಳಗಾವಿ: ಬೃಹತ್ ಬಾಯಿಯಲ್ಲಿ ರೋಚಕ ಸಾಹಸ, ಹಬ್ಬ ಹಿಡಿದು ಆಳದ ಬಾವಿಗೆ ಇಳಿದರು ಸಾಹಸ ಮಾಡಿದ್ರು ನೋಡಿ. ಮಾನವೀಯತೆ (Humanity) ಮುಂದೆ ಬೇರೇನೂ ಇಲ್ಲ ಎಂಬ ಸಂದೇಶಕ್ಕೆ ಎಲ್ಲರಿಂದ ವ್ಯಕ್ತವಾಯ್ತು ಶ್ಲಾಘನೆ. ಇದು ಬೆಳಗಾವಿಯಲ್ಲಿ (Belagavi Viral News) ನಡೆದ ರೋಚಕ ಘಟನೆ!
50 ಅಡಿ ಆಳದ ಬಾವಿಯಲ್ಲಿ ಸಿಲುಕಿದ್ದ ಶ್ವಾನವನ್ನು ರಕ್ಷಿಸಿದ ಬೆಳಗಾವಿ ಜಿಲ್ಲೆಯ ಅಥಣಿಯ ಅಗ್ನಿಶಾಮಕ ದಳದ ಸಿಬ್ಬಂದಿ ರೋಚಕ ಸಾಹಸ ನಡೆಸಿ ರಕ್ಷಣೆ ಮಾಡಿದರು. ಅಥಣಿಯ ಕಟಗೇರಿ ಗ್ರಾಮದಲ್ಲಿ 50 ಅಡಿಯ ಮೆಟ್ಟಿಲು ಇಲ್ಲದ ಬೃಹತ್ ಬಾವಿಗೆ ನಾಯಿಯೊಂದು ಬಿದ್ದಿತ್ತು.
ಇದನ್ನೂ ಓದಿ: Belagavi: ತಂದೆ ತಾಯಿಯೇ ದೇವರು! ಅಪ್ಪ, ಅಮ್ಮನ ಪುತ್ಥಳಿ ಸ್ಥಾಪಿಸಿದ ಮಗ!
ಜೀವ ಪಣಕ್ಕಿಟ್ಟ ಅಗ್ನಿಶಾಮಕದ ದಳದ ಸಿಬ್ಬಂದಿ
ಇದನ್ನು ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಬಿದ್ದ ನಾಯಿ ರಕ್ಷಣೆಗೆ ಪ್ರಾಣ ಪಣಕ್ಕಿಟ್ಟರು. ಅಗ್ನಿಶಾಮಕದ ದಳದ ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆಯಿಂದ ನಾಯಿ ಜೀವ ಉಳಿಯಿತು.
ಇದನ್ನೂ ಓದಿ: Toll Price Hike: ದುಪ್ಪಟ್ಟಾಯ್ತು ಟೋಲ್ ಶುಲ್ಕ, ಬರೋಬ್ಬರಿ ಶೇಕಡಾ 100ರಷ್ಟು ಹೆಚ್ಚಳ!
ಈ ಕಾರ್ಯಾಚರಣೆಗೆ ಸ್ಥಳೀಯರು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ