Viral Video: 5 ರೂಪಾಯಿ ಉಳಿಸಲು ಹೋಗಿ ಜೀವವನ್ನೇ ಕಳೆದುಕೊಳ್ತಿದ್ದ ಯುವಕ!

ಯುವಕನ ಜೀವ ಕಾಪಾಡಿದ ಕಾನ್ಸ್​ಟೇಬಲ್

ಯುವಕನ ಜೀವ ಕಾಪಾಡಿದ ಕಾನ್ಸ್​ಟೇಬಲ್

ಶೌಚ ಮುಗಿಸಿ ಹೊರಗೆ ಬರುವ ವೇಳೆಗಾಗಲೇ ರೈಲು ವೇಗವಾಗಿ ಚಲಿಸಲು ಆರಂಭಿಸಿದೆ. ಆದರೂ ಸಹ ಯುವಕ ರೈಲು ಚಲಿಸುತ್ತಿರುವಾಗಲೂ ಅದರಿಂದ ಇಳಿಯಲು ಹೋಗಿದ್ದಾನೆ.

  • News18 Kannada
  • 2-MIN READ
  • Last Updated :
  • Bellary, India
  • Share this:

ವಿಜಯನಗರ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ರೈಲಿನ ಗಾಲಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ಪೊಲೀಸ್ ಕಾನ್ಸ್​ಟೇಬಲ್ (Railway Police Constable) ಓರ್ವರು ರಕ್ಷಿಸಿದ ಘಟನೆ ನಡೆದಿದೆ. ರೈಲ್ವೆ ಪೊಲೀಸ್ ಕಾನ್ಸ್​ಟೇಬಲ್ ಸಂತೋಷ್ ರಾಠೋಡ್ ಎಂಬುವವರೇ ರೈಲ್ವೆ (Indian Railway Traveler) ಪ್ರಯಾಣಿಕರ ಜೀವ ಉಳಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.


ಹೊಸಪೇಟೆ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ರೈಲ್ವೆ ಪ್ಲಾಟ್‌ಫಾರಂ ಮೇಲೆ ನಿಂತಿದ್ದ ಪೊಲೀಸ್ ಕಾನ್ಸ್​ಟೇಬಲ್ ರೈಲಿನ ಅಡಿಗೆ ಬೀಳುತ್ತಿದ್ದ ಪ್ರಯಾಣಿಕ ಯುವಕನನ್ನು ಕೈ ಹಿಡಿದು ಮೇಲೆತ್ತಿ ರಕ್ಷಿಸಿದ್ದಾರೆ.




ಗದಗ ಮೂಲದ ಯುವಕ ಅಪಾಯಕ್ಕೆ ಸಿಲುಕಿದ್ದೇಗೆ?
ಗದಗ ಮೂಲದ ಯುವಕನೊಬ್ಬ ಹೊಸಪೇಟೆಯಿಂದ ತನ್ನೂರಿಗೆ ವಾಪಸ್ ಹೊರಟಿದ್ದ. ಈ ವೇಳೆ ರೈಲು ನಿಲ್ದಾಣದಲ್ಲಿ ಶೌಚಾಲಯದಲ್ಲಿ ಶೌಚಕ್ಕೆಂದು ಹೋದಾಗ 5 ರೂ. ಕೇಳಿದ್ದು, ಹಣ ಯಾಕೆ ಪಾವತಿಸಬೇಕೆಂದು ಅದೇ ಸಮಯಕ್ಕೆ ಫ್ಲಾಟ್​ಫಾರಂಗೆ ಬಂದು ನಿಂತಿದ್ದ ಬೆಳಗಾವಿ- ಸಿಕಂದರಾಬಾದ್ ರೈಲಿನಲ್ಲಿ ಶೌಚಕ್ಕೆ ತೆರಳಿದ್ದಾನೆ.




ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಇಳಿದ ಯುವಕ
ಶೌಚ ಮುಗಿಸಿ ಹೊರಗೆ ಬರುವ ವೇಳೆಗಾಗಲೇ ರೈಲು ವೇಗವಾಗಿ ಚಲಿಸಲು ಆರಂಭಿಸಿದೆ. ಆದರೂ ಸಹ ಯುವಕ ರೈಲು ಚಲಿಸುತ್ತಿರುವಾಗಲೂ ಅದರಿಂದ ಇಳಿಯಲು ಹೋಗಿದ್ದಾನೆ. ಆದರೆ ಚಲಿಸುತ್ತಿರುವ ರೈಲಿನಿಂದ ಕಾಲು ಜಾರಿ ರೈಲಿನ ಅಡಿಗೆ ಸಿಲುಕುವ ಅಪಾಯದಲ್ಲಿದ್ದ.



ಇದೇ ವೇಳೆಗೆ ಅಲ್ಲೆ ಇದ್ದ ರೈಲ್ವೆ ಪೊಲೀಸ್ ಕಾನ್ಸ್​ಟೇಬಲ್ ಸಂತೋಷ್ ರಾಠೋಡ್ ಅವರು ಪ್ರಯಾಣಿಕನ ಕೈ ಹಿಡಿದು ಮೇಲೆತ್ತಿದ್ದಾರೆ.


top videos



    ಅನಿರೀಕ್ಷಿತ ಕಾರ್ಯಾಚರಣೆಯ ವಿಡಿಯೋ ಸೆರೆಯಾಯ್ತು
    ಜೊತೆಗಿದ್ದ ರೈಲ್ವೆ ಪೊಲೀಸ್ ಗುರುರಾಜ್ ಅವರು ಕೂಡ ಈ ಅನಿರೀಕ್ಷಿತ ಕಾರ್ಯಾಚರಣೆಯಲ್ಲಿ ಸಹಕರಿಸಿ ಜೀವ ಉಳಿಸಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ರೈಲ್ವೆ ಇಲಾಖೆ ತನ್ನ ವಿಡಿಯೋ ಹಂಚಿಕೊಂಡಿದೆ.

    First published: