• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Sheetla Mata Mandir: ಮಕ್ಕಳಿಗೆ 'ಅಮ್ಮ' ಆಗಿದ್ರೆ ಈ ದೇವಿ ಅದನ್ನು ಗುಣಪಡಿಸುತ್ತಾಳಂತೆ! ಶೀತ್ಲಾ ಮಾತಾ ಮಂದಿರದ ಪವಾಡವಿದು

Sheetla Mata Mandir: ಮಕ್ಕಳಿಗೆ 'ಅಮ್ಮ' ಆಗಿದ್ರೆ ಈ ದೇವಿ ಅದನ್ನು ಗುಣಪಡಿಸುತ್ತಾಳಂತೆ! ಶೀತ್ಲಾ ಮಾತಾ ಮಂದಿರದ ಪವಾಡವಿದು

ಶೀತ್ಲಾ ಮಾತಾ

ಶೀತ್ಲಾ ಮಾತಾ

Sheetla Mata Mandir: ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ದೇವಸ್ಥಾನಗಳಿದ್ದು, ಆ ದೇವಾಲಯಗಳು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಇಷ್ಟೆಲ್ಲಾ ದೇವಾಲಯಗಳಿದ್ದರೂ ಕೆಲವು ದೇವಾಲಯಗಳು ಬಹಳ ಪ್ರಸಿದ್ಧವಾಗಿರುತ್ತದೆ. ಏಕೆಂದರೆ ಈ ದೇವಾಲಯಗಳು ಬಹಳ ವಿಶೇಷ ಶಕ್ತಿಯನ್ನು ಹೊಂದಿರುತ್ತವೆ.

ಮುಂದೆ ಓದಿ ...
  • Local18
  • 4-MIN READ
  • Last Updated :
  • Share this:

ನಮ್ಮ ದೇಶದ ರಸ್ತೆಯ (Road) ಇಕ್ಕೆಲಗಳಲ್ಲಿ ದೇವಸ್ಥಾನಗಳಿದೆ (temple). ಬಹುತೇಕ ಪ್ರತಿ ಹಳ್ಳಿ (Village) ಹಾಗೂ ಪಟ್ಟಣಗಳಲ್ಲಿ ದೇವಸ್ಥಾನವಿರುತ್ತದೆ. ಜನರಿಗೆ ದೇವರ (God) ಮೇಲೆ ಅಚಲವಾದ ನಂಬಿಕೆ. ತಮ್ಮ ಕಷ್ಟಗಳನ್ನು ಪರಿಹರಿಸುವ ಹಾಗೂ ಇಷ್ಟಾರ್ಥಗಳನ್ನು ನೆರವೇರಿಸುವ ಶಕ್ತಿ ಈ ದೇವರು ಎಂದು ಜನ ಪ್ರತಿದಿನ ಪೂಜಿಸುತ್ತಾರೆ. ನಮ್ಮ ದೇಶದಲ್ಲಿ (Country) ಲಕ್ಷಗಟ್ಟಲೆ ದೇವಸ್ಥಾನಗಳಿದ್ದು, ಆ ದೇವಾಲಯಗಳು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಇಷ್ಟೆಲ್ಲಾ ದೇವಾಲಯಗಳಿದ್ದರೂ ಕೆಲವು ದೇವಾಲಯಗಳು ಬಹಳ ಪ್ರಸಿದ್ಧವಾಗಿರುತ್ತದೆ. ಏಕೆಂದರೆ ಈ ದೇವಾಲಯಗಳು ಬಹಳ ವಿಶೇಷ ಶಕ್ತಿಯನ್ನು ಹೊಂದಿರುತ್ತವೆ. ಅಂಥಹ ಒಂದು ದೇವಾಲಯ ಬಿಹಾರದಲ್ಲಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಬಿಹಾರದಲ್ಲಿದೆ ಈ ದೇವಸ್ಥಾನ


ಹೌದು, ಬಿಹಾರದ ಪೂರ್ಣಿಯಾ ಜಿಲ್ಲೆ ಒಂದು ಭವ್ಯವಾದ ದೇವಾಲಯವನ್ನು ಹೊಂದಿದ್ದು, ಅದೇ ಶಿತ್ಲಾ ಮಾತಾ ದೇವಸ್ಥಾನ. ಪೂರ್ಣೆಯಾ ಜಿಲ್ಲೆ ಬಿಲ್ಲೋರಿಯ ಶ್ರೀ ಕೃಷ್ಣ ಪುರಿ ವಾರ್ಡ್ ನಂ. 44ರಲ್ಲಿ ಈ ದೇವಾಲಯವಿದ್ದು, ಇಲ್ಲಿನ ದೇವಿಯ ದರ್ಶನ ಮಾಡಿದರೆ ಸಿಡುಬು, ಅಮ್ಮ ಸೇರಿದಂತೆ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ.


1948ರಲ್ಲಿ ಈ ಮಾತಾ ಶಿತ್ಲಾ ಮಂದಿರ ನಿರ್ಮಾಣವಾಗಿದ್ದು, ದಡಾರ ಸಾಂಕ್ರಾಮಿಕ ರೋಗದಿಂದ ಪೂರ್ಣಿಯಾ ಮತ್ತು ಸೀಮಾಂಚಲ್ ಪ್ರದೇಶಗಳಲ್ಲಿ ಸಾವಿರಾರು ಜನರು ತೊಂದರೆಗೊಳಗಾದಾಗ ಈ ದೇವಾಲಯವನ್ನು ನಿರ್ಮಿಸಲಾಗಿತ್ತು ಎಂದು ಮಂದಿರ ಸಮಿತಿ ಅಧ್ಯಕ್ಷ ಪ್ರಮೋದ್ ದೇವನಾಥ್ ತಿಳಿಸಿದ್ದಾರೆ.


ಸ್ಥಳೀಯರ ಪ್ರಕಾರ ದಡಾರ ಕಾಯಿಲೆ ಅಲ್ಲಿನ ಜನರ ಪ್ರಾಣಕ್ಕೆ ಕುತ್ತಾಗಿತ್ತು. ಜನರು ಬಹಳ ಪರದಾಡತೊಡಗಿದ್ದರು. ಆದರೆ ಈ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದ ನಂತರ ದಡಾರ ಗುಣವಾಯಿತು. ಅದಕ್ಕಾಗಿಯೇ ಅಂದಿನಿಂದ ಸಿಡುಬು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಅನೇಕ ರೋಗಿಗಳು ಈ ದೇವಾಲಯಕ್ಕೆ ಬರುತ್ತಾರೆ. ದೇವಿಯ ದರ್ಶನ ಮಾಡಿದ ನಂತರ ಅವರ ಕಾಯಿಲೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ.


ಗ್ರಾಮಸ್ಥರು ಸಹ ಈ ದೇವಿಯ ಪವಾಡಗಳ ಬಗ್ಗೆ ಮಾತನಾಡಿದ್ದು, ಶೀತಲಾ ದೇವಿಯ ಪಾದದ ನೀರು ತುಂಬಾ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಈ ದೇವಿಯ ದರ್ಶನದಿಂದ ಇತರ ಆರೋಗ್ಯ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.




ದಡಾರ ಹಾಗೂ ಇತರ ಚರ್ಮರೋಗಗಳಿಗೆ ಸಿಗಲಿದೆ ಮುಕ್ತಿ


ಈ ದೇವಾಲಯದಲ್ಲಿ ಪೂಜೆಯ ನಂತರ ದೇವಸ್ಥಾನದ ಅರ್ಚಕರು ದೇವಿಯ ಪಾದಗಳಿಂದ ನೀರನ್ನು ತೆಗೆದುಕೊಂಡು ದಡಾರ ಪೀಡಿತರು ಮತ್ತು ಚರ್ಮ ರೋಗಗಳಿಂದ ಬಳಲುತ್ತಿರುವವರ ಮೇಲೆ ಸಿಂಪಡಿಸುತ್ತಾರೆ. ಕೆಲವೇ ಗಂಟೆಗಳಲ್ಲಿ ಅವರ ರೋಗ ಗುಣವಾಗುತ್ತವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಈ ಪವಾಡದ ಕಾರಣದಿಂದ ಬಿಹಾರ ಹಾಗೂ ಬೇರೆ ರಾಜ್ಯಗಳಿಂದಲ್ಲ ಮಾತ್ರವಲ್ಲದೇ ವಿದೇಶದಿಂದಲೂ ಅನೇಕರು ಇಲ್ಲಿಗೆ ದೇವಿಯ ದರ್ಶನಕ್ಕೆ ಬರುತ್ತಾರೆ.


ಇದನ್ನೂ ಓದಿ: ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ! ವರ್ಷಕ್ಕೆ 3 ತಿಂಗಳಷ್ಟೇ ದರ್ಶನ ಭಾಗ್ಯ!


ಪ್ರತಿ ವರ್ಷ ಶೀತಲ ಪೂಜೆಯ ಹಬ್ಬವನ್ನು ಇಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಬಿಹಾರ, ಯುಪಿ ಜೊತೆಗೆ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದಿಂದ ಸಾಕಷ್ಟು ಜನ ಭಕ್ತಾಧಿಗಳು ತಾಯಿಯ ದರ್ಶನಕ್ಕೆ ಬರುತ್ತಾರೆ. ಅಮ್ಮನ ದರ್ಶನದಿಂದ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ಸರ್ವ ಭಕ್ತಾಧಿಗಳ ನಂಬಿಕೆ.

Published by:Sandhya M
First published: