Lord Indra Temple: ಮಳೆಗಾಗಿ ಆರಂಭವಾದ ಪೂಜೆಯ ಹಿಂದಿದೆ ನೂರಾರು ವರ್ಷಗಳ ಇತಿಹಾಸ

ಪೂಜೆ

ಪೂಜೆ

Lord Indra Temple: ಇಲ್ಲೊಂದು ಇಂದ್ರನ ದೇವಾಲಯವಿದೆ. ಪ್ರತಿ ವರ್ಷ ವೈಶಾಖ ಮಾಸದ 2ನೇ ದಿನದಂದು ಗ್ರಾಮದ ನಿವಾಸಿಗಳು ಶ್ರದ್ಧಾ ಭಕ್ತಿಯಿಂದ ಇಂದ್ರನಿಗೆ ಪೂಜೆ ಸಲ್ಲಿಸುತ್ತಾರೆ.

  • Local18
  • 2-MIN READ
  • Last Updated :
  • Share this:

ನಮ್ಮ ದೇಶದಲ್ಲಿ (Country) ಮಳೆಗಾಲದಲ್ಲಿ (Rain) ಸರಿಯಾದ ಸಮಯಕ್ಕೆ ಮಳೆ ಬರಲಿಲ್ಲ ಎಂದರೆ ದೇವರ ಪೂಜೆ ಮಾಡಲು ಆರಂಭಿಸುತ್ತಾರೆ. ಹಾಗೆಯೇ, ಕೆಲವೊಂದು ಪ್ರದೇಶಗಳಲ್ಲಿ ಈ ಪೂಜೆ ಸಂಪ್ರದಾಯವಾಗಿ ಮುಂದುವರೆದಿದ್ದು, ಆ ರೀತಿಯ ಒಂದು ದೇವಸ್ಥಾನದ (Temple) ಬಗ್ಗೆ ಮಾಹಿತಿ ಇಲ್ಲಿದೆ. ಎಲ್ಲರಿಗೂ ಗೊತ್ತಿರುವಂತೆ ಗಂಗಾನದಿಯ ದಡದಲ್ಲಿ ಮೀನುಗಾರರು ವಾಸಿಸುತ್ತಾರೆ. ಒಂದಾನೊಂದು ಕಾಲದಲ್ಲಿ ಗಂಗಾ ತೊರೆ ಅಥವಾ ಯ ನದಿಯ ನಿವಾಸಿಗಳ ಮುಖ್ಯ ಜೀವನೋಪಾಯವೆಂದರೆ ಮೀನುಗಾರಿಕೆ. ಹಾಗೆಯೇ, ಮಾಲ್ಡಾದ ಮಾಣಿಕ್ಚಕ್ ಬ್ಲಾಕ್ನ ಮಥುರಾಪುರದ ಧನರಾಜ್ ಗ್ರಾಮದಲ್ಲಿ ಇನ್ನೂ ಮೀನುಗಾರರಿದ್ದಾರೆ. ಈ ಗ್ರಾಮ ಬಹಳ ಪ್ರಾಚೀನವಾದುದು ಎನ್ನಲಾಗುತ್ತದೆ. ಇಲ್ಲೊಂದು ಇಂದ್ರನ (Lord Indra)  ದೇವಾಲಯವಿದೆ. ಪ್ರತಿ ವರ್ಷ ವೈಶಾಖ ಮಾಸದ 2ನೇ ದಿನದಂದು ಗ್ರಾಮದ ನಿವಾಸಿಗಳು ಶ್ರದ್ಧಾ ಭಕ್ತಿಯಿಂದ ಇಂದ್ರನಿಗೆ ಪೂಜೆ ಸಲ್ಲಿಸುತ್ತಾರೆ.


ಮಳೆಗಾಗಿ ಆರಂಭವಾದ ಪೂಜೆ


ಅಂಬಿಗರಿಂದ ಸುತ್ತುವರಿದಿರುವ ಧನರಾಜ್ ಗ್ರಾಮವು ಸುಮಾರು ಎರಡು ಮೂರು ಶತಮಾನಗಳ ಹಿಂದೆ ಸ್ಥಾಪಿಸಲ್ಪಟ್ಟ ಇಂದ್ರ ದೇವಾಲಯವನ್ನು ಹೊಂದಿದೆ. ಈ ದೇವಸ್ಥಾನ ಇಂದಿಗೂ ಗ್ರಾಮದ ಒಂದು ಮಾವಿನ ತೋಟದಲ್ಲಿದೆ. ಮಾಲ್ಡಾ ಜಿಲ್ಲೆಯಲ್ಲಿ ಇಂದ್ರ ದೇವನನ್ನು ಪೂಜಿಸಲಾಗಿದ್ದರೂ, ಇಲ್ಲಿ ಸ್ಥಾಪಿತ ವಿಗ್ರಹವು ಹೆಚ್ಚು ಕಾಣುವುದಿಲ್ಲ. ಇನ್ನು ಈ ದೇವಾಲಯದಲ್ಲಿ ಇಂದ್ರನನ್ನು ಪೂಜಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಸೇರುತ್ತಾರೆ. ಪೂಜೆಯ ನಂತರ, ಜಾತ್ರೆ ಹಾಗೂ ಹಬ್ಬವು ಒಂದು ವಾರದವರೆಗೆ ನಡೆಯುತ್ತದೆ.


ಇದನ್ನೂ ಓದಿ: ಮೇ 15 ರವರೆಗೆ 3 ರಾಶಿಯವರಿಗೆ ಸಿಗಲಿದೆ ಕೋಟಿ ಕೋಟಿ ದುಡ್ಡು, ಶ್ರೀಮಂತರಾಗೋದು ಫಿಕ್ಸ್


ಸ್ಥಳೀಯ ನಿವಾಸಿ ಕಾಳಿ ಸಾಧನ್ ಮುಖರ್ಜಿ ಮಾತನಾಡಿ, ಧನರಾಜ್ ಗ್ರಾಮ ಬಹಳ ಹಳೆಯದು. ಈ ಗ್ರಾಮದಲ್ಲಿ ಮುಖ್ಯವಾಗಿ ಮೀನುಗಾರರು ವಾಸಿಸುತ್ತಾರೆ. ಒಂದು ವರ್ಷ ಭೀಕರ ಬರಗಾಲ ಬಂದಿತ್ತಂತೆ. ಆಗ ಗ್ರಾಮದ ಮೀನುಗಾರರು ಮಳೆಗಾಗಿ ಇಂದ್ರನಿಗೆ ಪೂಜೆ ಸಲ್ಲಿಸಿದರು. ಆಗ ಮಳೆಯಾಗುತ್ತದೆ. ನದಿ ದಡದಲ್ಲಿ ನೀರು ತುಂಬಿದಾಗ ಮತ್ತೆ ಮೀನುಗಾರಿಕೆ ಶುರುವಾಗುತ್ತದೆ. ಅಂದಿನಿಂದ, ಈ ಗ್ರಾಮದಲ್ಲಿ ಪ್ರತಿ ವರ್ಷ ವೈಶಾಖ ಮಾಸದಲ್ಲಿ ಇಂದ್ರ ದೇವನನ್ನು ಪೂಜಿಸಲಾಗುತ್ತದೆ.


ಮಾಲ್ಡಾ ಜಿಲ್ಲೆಯಲ್ಲಿ ಇಂತಹ ಇಂದ್ರನ ಮೂರ್ತಿ ಪೂಜೆ ಬೇರೆಲ್ಲೂ ಕಾಣಸಿಗುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ಜಿಲ್ಲೆಯ ಏಕೈಕ ಧನರಾಜ್ ಗ್ರಾಮದಲ್ಲಿ ವರ್ಷದ ಕೆಲವು ಸಮಯಗಳಲ್ಲಿ ಇಂದ್ರನನ್ನು ಪೂಜಿಸಲಾಗುತ್ತದೆ. ಆದರೆ, ಈ ಪೂಜೆ ಯಾವಾಗ ಆರಂಭವಾಯಿತು ಎಂಬುದು ಆ ಪ್ರದೇಶದ ನಿವಾಸಿಗಳಿಗೆ ತಿಳಿದಿಲ್ಲ.


ಮಾಲ್ಡಾ ಜಿಲ್ಲೆಯ ಮಾಣಿಚಕ್ ಬ್ಲಾಕ್ ಗಂಗಾ ಜಲಾನಯನ ಪ್ರದೇಶದಲ್ಲಿದೆ. ಗಂಗೆಯ ಹಲವಾರು ಉಪನದಿಗಳು ವಿಶಾಲವಾದ ಪ್ರದೇಶವನ್ನು ಒಳಗೊಂಡಿವೆ. ಧನರಾಜ್ ಗ್ರಾಮದ ಹಿಂದೆ ಗಂಗಾನದಿಯೊಂದು ಹರಿಯುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ.



ಮುಂದುವರೆದ ಸಂಪ್ರದಾಯ


ಸ್ಥಳೀಯ ನಿವಾಸಿ ಗೌರ್ ಚಂದ್ರ ಮಂಡಲ್ ಮಾತನಾಡಿ, ಈ ಪೂಜೆಯು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಲ್ಲದೇ ದೂರದ ಜನರು ಇಲ್ಲಿಗೆ ಇಂದ್ರ ಪೂಜೆ ಮಾಡಲು ಬರುತ್ತಾರೆ ಎಂದಿದ್ದಾರೆ.


ಇದನ್ನೂ ಓದಿ: ಈ 3 ರಾಶಿಯವರಿಗೆ ರಾಹು ಕಾಟ ಸ್ಟಾರ್ಟ್, ಕಷ್ಟ ಮುಗಿಯೋದೇ ಇಲ್ಲ

top videos


    ಇಲ್ಲಿನ ಹಿರಿಯ ನಿವಾಸಿ ಕಾಳಿ ಸಾಧನ್ ಮುಖರ್ಜಿ ಮಾತನಾಡಿ, ಮಳೆಗಾಗಿ ಮೀನುಗಾರರು ಈ ಪೂಜೆ ಆರಂಭಿಸಿದ್ದು, ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂದಿನ ದಿನಗಳಲ್ಲಿ ಈ ಪೂಜೆಯು ಪ್ರತಿ ವರ್ಷವೂ ಜಾತ್ರೆಯ ಜೊತೆಗೆ ಶ್ರೇಯಸ್ಸಿಗಾಗಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.

    First published: