ವಾಸ್ತು ಶಾಸ್ತ್ರ (Vastu Shastra) ಎಂಬುದು ನಮ್ಮ ಪುರಾತನ ಭಾರತೀಯ ಸಂಪ್ರದಾಯವೆನಿಸಿದ್ದು, ಯಾವುದೇ ಕಟ್ಟಡಗಳ (Building) ನಿರ್ಮಾಣದ ಸಮಯದಲ್ಲಿ ಅದು ನಿವೇಶನವಾಗಿರಬಹುದು ಇಲ್ಲವೇ ಕಚೇರಿಯಾಗಿರಬಹುದು ವಾಸ್ತು ಸಲಹೆಗಳನ್ನು ಅನುಸರಿಸಿಕೊಂಡು ನಿರ್ಮಿಸಿದರೆ ಶುಭ ಎಂಬ ನಂಬಿಕೆ ಇದೆ. ವಾಸ್ತು ದೋಷಗಳನ್ನು ಪರಿಹರಿಸಿದಂತೆ ಆ ಕಟ್ಟಡದಲ್ಲಿ ನೆಲೆಸುವವರಿಗೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂಬುದು ಅನಾದಿ ಕಾಲದಿಂದಲೂ ನಂಬಿಕೊಂಡು ಬಂದಿರುವ ಶಾಸ್ತ್ರವಾಗಿದೆ.
ಪುರಾತನ ವಾಸ್ತು ಶಾಸ್ತ್ರ ಗ್ರಂಥಗಳ ಪ್ರಕಾರ, ಯಾವುದೇ ಸ್ಥಳದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಮಯದಲ್ಲಿ 45 ಶಕ್ತಿ ಕ್ಷೇತ್ರಗಳನ್ನು ರಚಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಂತೆ, ಒಂದು ಆಸ್ತಿ ಕೂಡ ಕುಂಡಲಿ ಅಥವಾ ಜಾತಕವನ್ನು ಹೊಂದಿದೆ.
ಸಸ್ಯಸಮೃದ್ಧ ಸಾರಭೂತ ತೈಲಗಳ ಬಳಕೆ
ಈ ಶಕ್ತಿ ಕ್ಷೇತ್ರಗಳು ಸಮತೋಲಿತವಾಗಿದ್ದಾಗ: ಯಶಸ್ಸು, ಸಮೃದ್ಧಿ, ಸಂಪತ್ತು ಮತ್ತು ಸಂತೋಷವು ಅಲ್ಲಿ ನಿವಾಸ ಮಾಡುವ ಜನರಿಗೆ ಲಭಿಸುತ್ತದೆ ಎಂಬುದು ಸಿದ್ಧಾಂತವಾಗಿದೆ.
ಸಾರಭೂತ ತೈಲಗಳೆಂದರೆ ಪ್ರಾಕೃತಿಕ ಅಂಶಗಳಾದ ಹೂವು, ಸುಗಂಧ ಸಸ್ಯಗಳು, ಗಿಡಮೂಲಿಕೆಗಳಿಂದ ತೆಗೆದ ಸಾರಯುಕ್ತ ತೈಲವಾಗಿದ್ದು, ಮನೆಗಳಲ್ಲಿ ಆಯಾಯ ದಿಕ್ಕಿನಲ್ಲಿ ಈ ತೈಲಗಳನ್ನು ಬಳಕೆಯನ್ನು ಮಾಡಬಹುದಾಗಿದೆ.
ಇದನ್ನೂ ಓದಿ: ನಿಮ್ಮ ಲವ್ ಲೈಫ್ ಮೇಲೆ ಈ ಘಟನೆಗಳಿಂದ ಎಫೆಕ್ಟ್ ಬೀಳುತ್ತೆ ಹುಷಾರ್!
ದಿಕ್ಕಿಗೆ ಅನುಸಾರವಾಗಿ ಈ ತೈಲಗಳನ್ನು ಬಳಸುವುದು ಮನೆಯಲ್ಲಿ ಶಕ್ತಿಯನ್ನು ಚುರುಕುಗೊಳಿಸುತ್ತದೆ ಹಾಗೂ ಸದಸ್ಯರಿಗೆ ಹೊಸ ಬಗೆಯ ಚೇತನವನ್ನುಂಟು ಮಾಡುತ್ತದೆ ಎಂಬುದು ವಾಸ್ತುಶಾಸ್ತ್ರಜ್ಞರ ಹೇಳಿಕೆಯಾಗಿದೆ.
ಸುವಾಸನೆಗಳಿಂದ ಋಣಾತ್ಮಕ ಶಕ್ತಿಯನ್ನು ಕೊನೆಗೊಳಿಸುವುದು
ಮೂಗು, ಕಿವಿ, ಬಾಯಿ, ಗಂಟಲು ಮೊದಲಾದ ಗ್ರಹಣೇಂದ್ರಿಯಗಳು ದೃಷ್ಟಿಗಿಂತಲೂ ಚುರುಕು ಹಾಗೂ ಸಂವೇದನಾ ಸೂಚನೆಗಳಿಗೆ ಹೆಚ್ಚು ಸಂವೇದವಾಗಿರುತ್ತವೆ. ಇವುಗಳು ಕೂಡ ವಾಸ್ತುದೋಷಗಳನ್ನು ಪರಿಹರಿಸುವಲ್ಲಿ ಸಿದ್ಧಹಸ್ತವಾಗಿವೆ ಎಂದು ಮಹಾವಾಸ್ತು ಅಭ್ಯಾಸಿ ಮತ್ತು ವರ್ಣಚಿತ್ರಕಾರರಾದ ನಮ್ರತಾ ಕೃಪಲ್ಲನಿ ತಿಳಿಸಿದ್ದಾರೆ.
ಪುಣೆಯಲ್ಲಿ ನ್ಯೂ ಏಜ್ ಮ್ಯಾಜಿಕ್ ಎಂಬ ವಾಸ್ತು ಸಲಹಾ ಸಂಸ್ಥೆಯನ್ನು ನಡೆಸುತ್ತಿರುವ ನಮ್ರತಾ ಗ್ರಹಣೇಂದ್ರಿಯಗಳಿಗೆ ಉತ್ತಮವಾದ ಸುವಾಸನೆಯನ್ನು ಒದಗಿಸುವುದು ಕೂಡ ಮನೆಯನ್ನು ವಾಸ್ತುದೋಷಗಳಿಂದ ಕಾಪಾಡುವ ವಿಧಾನವಾಗಿದೆ ಎಂದು ತಿಳಿಸಿದ್ದಾರೆ.
ಪೂಜಾ ಕೊಠಡಿಗಳಲ್ಲಿ ಧೂಪ ದೀಪಗಳ ಬಳಕೆ
ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಅಥವಾ ಪೂಜಾ ಕೊಠಡಿಯಲ್ಲಿ ಸೇವಂತಿಗೆ, ಮಲ್ಲಿಗೆ, ದಾಸವಾಳ, ಅಗರಬತ್ತಿ ಹಾಗೂ ಕರ್ಪೂರ ಸುವಾಸನೆ ಇದ್ದೇ ಇರುತ್ತದೆ. ಇದು ಕೂಡ ಮನೆಯ ಸುಖ ಶಾಂತಿ ಸಮೃದ್ಧಿಗೆ ಆಧಾರವಾಗಿದೆ ಎಂಬುದು ನಮ್ರತಾ ಮಾತಾಗಿದೆ.
ಮನೆಯ ಅಥವಾ ಕಟ್ಟಡದ ದಿಕ್ಕುಗಳು ಒಂದೊಂದು ಶಕ್ತಿಯ ಅಂಶಗಳನ್ನು ಹೊಂದಿವೆ. ಈ ಶಕ್ತಿಯನ್ನು ಇನ್ನಷ್ಟು ಬಲಗೊಳಿಸಲು ಅದನ್ನು ಸಕ್ರಿಯಗೊಳಿಸುವ ಅಂಶಗಳನ್ನು ಬಳಸಬೇಕಾಗುತ್ತದೆ.
ಹೂವು, ಪೂಜಾ ಸಾಮಾಗ್ರಿಗಳು, ದೀಪ, ಧೂಪ, ಕರ್ಪೂರ, ಅಗರಬತ್ತಿಗಳು ಕೂಡ ಈ ದಿಕ್ಕಿನಲ್ಲಿರುವ ಶಕ್ತಿಯ ಅಂಶಗಳನ್ನು ವೃದ್ಧಿಸಿ ನಮಗೆ ಸುಖ, ಶಾಂತಿ, ನೆಮ್ಮದಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ವಿಧಾನ
ಅಗರಬತ್ತಿ ಧೂಳು ಹಾಗೂ ಒಣಗಿದ ಹೂವುಗಳನ್ನು ಸ್ವಚ್ಛಗೊಳಿಸುವುದು ಹೆಚ್ಚಿನ ಕೆಲಸವಾಗುತ್ತದೆ ಎಂಬ ಅನಿಸಿಕೆ ಇದ್ದಲ್ಲಿ ಸುಗಂಧಿತ ತೈಲಗಳನ್ನು ಡಿಫ್ಯೂಸರ್ಗಳಲ್ಲಿ ಅಳವಡಿಸುವುದಾಗಿದೆ. ಕೆಲವೊಂದು ಹೂವುಗಳು, ಗಿಡಮೂಲಿಕೆಗಳಿಂದ ತೆಗೆದ ಈ ಎಣ್ಣೆಗಳನ್ನು ಮನೆಗಳಲ್ಲಿ ಸುವಾಸನೆಗಾಗಿ ಬಳಸುವುದು ಮನೆಯಲ್ಲಿ ಧನಾತ್ಮಕ ಅಂಶವನ್ನು ಪ್ರಚೋದಿಸುತ್ತದೆ ಎಂಬುದು ನಮ್ರತಾ ಮಾತಾಗಿದೆ.
ವೇದಗಳಲ್ಲಿ ಉಲ್ಲೇಖಿಸಿರುವಂತೆ ಹೂವುಗಳು, ಗಿಡಮೂಲಿಕೆಗಳು, ಮಸಾಲೆಗಳನ್ನು ಬಳಸಿ ಪುನರಾವರ್ತಿಸಬಹುದಾದ ಪ್ರತಿಯೊಂದು ಅಂಶಗಳಲ್ಲೂ ಶಕ್ತಿ ಇದೆ ಎಂಬುದು ನಮ್ರತಾ ಕೃಪಲ್ಲನಿ ಮಾತಾಗಿದೆ. ಹೂವುಗಳು ಹಾಗೂ ಕರ್ಪೂರಗಳ ಬದಲಿಗೆ ನೈಸರ್ಗಿಕ ಗಿಡಮೂಲಿಕೆಯುಕ್ತ ತೈಲಗಳ ಬಳಕೆಯನ್ನು ಬಳಸಿ ಮನೆಯನ್ನು ಧನಾತ್ಮಕಗೊಳಿಸಬಹುದು ಎಂಬುದು ನಮೃತಾ ಕೃಪಲ್ಲನಿ ಸಲಹೆಯಾಗಿದೆ.
ತೈಲಗಳನ್ನು ಹೇಗೆ ತಯಾರಿಸಲಾಗುತ್ತದೆ
ಸಾರಭೂತ ತೈಲಗಳು ಉಗಿ ಅಥವಾ ನೀರಿನ ಬಟ್ಟಿ ಇಳಿಸುವಿಕೆಯ ಮೂಲಕ ಅಥವಾ ಕೋಲ್ಡ್ ಪ್ರೆಸ್ಸಿಂಗ್ನಂತಹ ಯಾಂತ್ರಿಕ ವಿಧಾನಗಳ ಮೂಲಕ ಸಸ್ಯಗಳಿಂದ ಹೊರತೆಗೆಯಲಾದ ತೈಲಗಳಾಗಿವೆ.
ಈ ತೈಲಗಳನ್ನು ನೀವು ಶಕ್ತಿ ಹೊರಸೂಸುವ ಕೇಂದ್ರಗಳಲ್ಲಿ ಇರಿಸಿದರಾಯಿತು. ಆ ದಿಕ್ಕಿನಿಂದ ನಿಮಗೆ ಬೇಕಾದ ಶಕ್ತಿ ಹಾಗೂ ಖ್ಯಾತಿ ದೊರೆಯುತ್ತದೆ. ನಿಮ್ಮೊಂದು ಧನಾತ್ಮಕ ಶಕ್ತಿ ಜಾಗೃತಗೊಳ್ಳುತ್ತದೆ.
ಶಕ್ತಿ ದೇವತೆಗಳ ಪೂಜೆ ಏಕೆ ಮಹತ್ವವಾದುದು?
ಹಿಂದೂ ಧರ್ಮಗಳಲ್ಲಿ ಶಕ್ತಿ ಕೇಂದ್ರಗಳನ್ನು ದೇವತೆಗಳು ನಿಯಂತ್ರಿಸುತ್ತಾರೆ. ಹಾಗಾಗಿ ಪ್ರಾಕೃತಿಕ ಅಂಶಗಳಿಂದ ಇಂತಹ ಶಕ್ತಿ ದೇವತೆಗಳನ್ನು ಪೂಜಿಸುವುದು ಮನೆಯ ಸುಖ, ಶಾಂತಿ, ನೆಮ್ಮದಿಗೆ ಕಾರಣವಾಗುತ್ತದೆ ಎಂಬುದು ಕೃಪಲ್ಲನಿ ಸಲಹೆಯಾಗಿದೆ. ಲಕ್ಷ್ಮಿಯು ಸಂಪತ್ತಿನ ದೇವತೆಯಾದರೆ, ಗಣೇಶ ಪರಿಶ್ರಮದ ಪ್ರತಿರೂಪವಾಗಿದ್ದಾರೆ ಇನ್ನು ಭಗವಾನ್ ಶಿವನು ಮೃತ್ಯುವಿಗೆ ಅದಿಧೇವತೆಯಾಗಿದ್ದು, ಸರಸ್ವತಿ ಜ್ಞಾನ ದೇವತೆ ಎಂದೆನಿಸಿದ್ದಾರೆ.
ವಾಸ್ತು ಶಾಸ್ತ್ರಗಳು ಪಂಗಡವಲ್ಲ, ವಾಸ್ತವವಾಗಿ ಎಲ್ಲಾ ಹಿಂದೂ ಧರ್ಮವು ಕೇವಲ ಜೀವನ ವಿಧಾನವಾಗಿದೆ ಮತ್ತು ಧರ್ಮವಲ್ಲ ಎಂಬುದು ನಮ್ರತಾ ಮಾತಾಗಿದೆ. ಅರೋಮಾಥೆರಪಿ ಅಭ್ಯಾಸದಲ್ಲಿ ಸಾರಭೂತ ತೈಲಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಉಸಿರಾಡಲಾಗುತ್ತದೆ ಅಥವಾ ದುರ್ಬಲಗೊಳಿಸಲಾಗುತ್ತದೆ ಮತ್ತು ಚರ್ಮಕ್ಕೆ ಅನ್ವಯಿಸಲಾಗುತ್ತದೆ.
ತೈಲಗಳನ್ನು ಬಳಸುವುದು ಹೇಗೆ?
ನಕಾರಾತ್ಮಕತೆಯನ್ನು ನಿವಾರಿಸಲು ಎಸನ್ಶಿಯಲ್ ತೈಲಗಳ ಬಳಕೆಯನ್ನು ಮಾಡುವುದು ಒಳಿತು ಎಂಬುದು ವಾಸ್ತುಶಾಸ್ತ್ರಜ್ಞರ ಸಲಹೆಯಾಗಿದೆ. ಬಾಟಲಿಯಲ್ಲಿ ಹಾಕಿಟ್ಟು ಆ ಸ್ಥಳದಲ್ಲಿ ಸಿಂಪಡಿಸಲೂಬಹುದು ಇಲ್ಲದಿದ್ದರೆ ಸುವಾಸಿತ ಬಾಟಲಿಗಳಲ್ಲಿ ತೆಗೆದಿಡಲೂಬಹುದು ಎಂಬುದು ಶಾಸ್ತ್ರಜ್ಞರು ನೀಡಿರುವ ಸಲಹೆಯಾಗಿದೆ.
ಬ್ರಹ್ಮಸ್ಥಾನ: ಮನೆಯ ಕೇಂದ್ರಭಾಗ
ಬ್ರಹ್ಮಸ್ಥಾನವು ಕೇಂದ್ರಭಾಗವಾಗಿದ್ದು ನಿಮ್ಮ ಆಸ್ತಿಗೆ ಅನುಗುಣವಾಗಿ ಮನಸ್ಸನ್ನು ಪ್ರತಿನಿಧಿಸುತ್ತದೆ. ಈ ಜಾಗವನ್ನು ಸಾಮಾನ್ಯವಾಗಿ ಖಾಲಿಬಿಡುವುದು ವಾಡಿಕೆಯಾಗಿದೆ. ಇದರಲ್ಲಿರುವ ಅಂಶವು ಮನೆಯ ಪ್ರತಿಯೊಂದು ಕೋಣೆಗೂ ಪ್ರಯಾಣಿಸುತ್ತದೆ ಎಂಬುದು ನಂಬಿಕೆಯಾಗಿದೆ. ವೈದಿಕ ವಾಸ್ತುಶಿಲ್ಪದಲ್ಲಿ ಕೇಂದ್ರ ಪ್ರಾಂಗಣವೆಂಬ ಉಲ್ಲೇಖವನ್ನು ಹೊಂದಿದೆ.
ಈ ಸ್ಥಳದಿಂದ ಮನೆಯ ಪ್ರತಿ ಮೂಲೆಗೂ ಶಕ್ತಿ ಸಂಚಯಗೊಳ್ಳಲು ಚೆಂಡುಹೂವಿನ ಎಣ್ಣೆಯನ್ನು ಬಳಸಬಹುದಾಗಿದೆ. ಈ ತೈಲದ ಶಕ್ತಿಯಿಂದ ಮನೆಯ ಸುತ್ತಲೂ ಧನಾತ್ಮಕ ಅಂಶ ಹೆಚ್ಚುತ್ತದೆ.
ಉತ್ತರ ದಿಕ್ಕು: ಶಕ್ತಿ ಸ್ಪಷ್ಟಪಡಿಸುವಿಕೆಯ ಕೇಂದ್ರ
ಭಗವಾನ್ ವಿಷ್ಣುವಿನ ಒಂದು ಅಂಶವಾದ ಭೂಧರ ಶಕ್ತಿಯನ್ನು ಪ್ರಕಟಪಡಿಸುವ ದೇವರಾಗಿದ್ದಾರೆ. ಈ ಕಿಡಿ ಒಮ್ಮೆ ಹತ್ತಿಕೊಂಡರೆ ಮನೆಯ ಸುತ್ತಲೂ ವ್ಯಾಪಿಸಿ ಮನೆಯ ಸದಸ್ಯರಿಗೆಲ್ಲಾ ಹೊಸ ಬಗೆಯ ಹುರುಪನ್ನು ಒದಗಿಸುತ್ತದೆ.
ಅದೃಷ್ಟದ ಬಾಗಿಲು ತೆರೆದಂತೆಯೇ ಎಂಬುದು ನಮೃತಾ ಮಾತಾಗಿದೆ. ಈ ಅಭಿವ್ಯಕ್ತಿಯನ್ನು ಉತ್ತೇಜನಗೊಳಿಸಲು ಕೆಂಪು ಶ್ರೀಗಂಧದ ಮರ ಹಾಗೂ ಕಸ್ತೂರಿ ಎಣ್ಣೆಯನ್ನು ಮನೆಯಲ್ಲಿ ಬಳಸಬಹುದು ಎಂಬುದು ಅವರ ಸಲಹೆಯಾಗಿದೆ.
ಪೂರ್ವ ದಿಕ್ಕು: ಮಿತಿಯಿಲ್ಲದ ಪ್ರೀತಿಯ ಶಕ್ತಿ ಕ್ಷೇತ್ರ
ಪೂರ್ವದಲ್ಲಿ ಶಕ್ತಿ ಕ್ಷೇತ್ರವನ್ನು "ಕನೆಕ್ಟರ್" ಎಂದು ಕರೆಯಲಾಗುತ್ತದೆ, ಏಕೆಂದರೆ ಅದು ಸಂಬಂಧಗಳನ್ನು ಸಮನ್ವಯಗೊಳಿಸುತ್ತದೆ, ವ್ಯಕ್ತಿಗಳನ್ನು ಸಂಪರ್ಕಿಸುತ್ತದೆ, ಮಿತ್ರರನ್ನು ಮತ್ತು ಸ್ನೇಹಿತರನ್ನು ಆಹ್ವಾನಿಸುತ್ತದೆ ಮತ್ತು ಮಿತಿಯಿಲ್ಲದ ಪ್ರೀತಿಯ ಅರ್ಥವನ್ನು ವ್ಯಾಪಿಸುವಂತೆ ಮಾಡುತ್ತದೆ. ಮನೆಯ ಸದಸ್ಯರ ನಡುವೆ ಭಾವನಾತ್ಮಕ ಬಂಧವನ್ನು ಬಲಗೊಳಿಸುತ್ತದೆ.
ಆದಿಸ್ವರೂಪದ ಹಿಂದೂ ದೇವರನ್ನು ಆರ್ಯಮನನೊಂದಿಗೆ ಈ ಶಕ್ತಿ ಸಮ್ಮಿಳಿತಗೊಂಡಿದೆ. ಈ ಶಕ್ತಿ ಕ್ಷೇತ್ರವನ್ನು ಸಕ್ರಿಯಗೊಳಿಸಲು, ಕೇಸರಿ, ಕೆಂಪು ಗುಲಾಬಿ ಮತ್ತು ಕರ್ಪೂರ ತೈಲಗಳ ಮಿಶ್ರಣವನ್ನು ಮನೆಯಲ್ಲಿ ಬಳಸುವುದು ಉತ್ತಮವಾಗಿದೆ. ಜನರೊಂದಿಗೆ ಬೆರೆಯುವುದು ಹೇಗೆ ಮತ್ತು ಮನೆಯಲ್ಲಿ ಶಾಂತಿ ಸಮಾಧಾನಗಳನ್ನು ಹೇಗೆ ಸ್ಥಾಪಿಸಬಹುದು ಎಂಬ ತಿಳುವಳಿಕೆಯನ್ನು ನೀಡುತ್ತದೆ ಎಂದು ನಮೃತಾ ತಿಳಿಸುತ್ತಾರೆ.
ದಕ್ಷಿಣ ದಿಕ್ಕು: ಖ್ಯಾತಿ, ಪ್ರಸಿದ್ಧಿಯ ಶಕ್ತಿಯ ಸಕ್ರಿಯಗೊಳಿಸುವಿಕೆ
ಬದಲಾವಣೆಯ ನಿಯಂತ್ರಕ ವಿವಸ್ಮನ್, ಭೂಧರನಿಗೆ ಸಹಾಯ ಮಾಡುತ್ತಾನೆ ಹಾಗೂ ಹೆಸರು ಮತ್ತು ಖ್ಯಾತಿಯು ಈ ಶಕ್ತಿ ಕ್ಷೇತ್ರಕ್ಕೆ ಸಂಪರ್ಕ ಹೊಂದಿದೆ ಎಂದು ಕೃಪಲ್ಲನಿ ಹೇಳುತ್ತಾರೆ. ನಿಮ್ಮ ಸ್ವಂತ ವೈಯಕ್ತಿಕ ಯಶಸ್ಸಿನ ಉತ್ತುಂಗವನ್ನು ತಲುಪಲು ನಿಮಗೆ ಅನುವು ಮಾಡಿಕೊಡುತ್ತ ಶಕ್ತಿ ಮೂಲೆ ಇದಾಗಿದೆ ಎಂಬುದು ನಮೃತಾ ಹೇಳಿಕೆಯಾಗಿದೆ. ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಗಳಿಗೆ ಹೆಸರು, ಖ್ಯಾತಿ ದೊರೆಯುತ್ತದೆ.
ಈ ವ್ಯಕ್ತಿಗಳು ತಮ್ಮ ವೃತ್ತಿಜೀವನದಲ್ಲಿ ಹೆಚ್ಚು ಸಾಧನೆ ಸಾಧಿಸಲು ಬಯಸುತ್ತಾರೆ. ಇದು ನಿವಾಸಿಗಳಿಗೆ ಆತ್ಮ ವಿಶ್ವಾಸ ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸುವ ಶಕ್ತಿಯನ್ನು ಒದಗಿಸುತ್ತದೆ. ಈ ಸ್ಥಳಕ್ಕಿರುವ ಶಕ್ತಿಯನ್ನು ಹೆಚ್ಚಿಸಲು ಮಲ್ಲಿಗೆ ಮತ್ತು ಶ್ರೀಗಂಧದ ತೈಲಗಳ ಮಿಶ್ರಣವನ್ನು ಬಳಸಿ.
ಪಶ್ಚಿಮ ದಿಕ್ಕು: ಪ್ರೇರಕ ಶಕ್ತಿ ಕ್ಷೇತ್ರ
ಹಿಂದೂ ದೇವರಾದ ಮಿತ್ರ ಪಶ್ಚಿಮದಲ್ಲಿ ಪ್ರೇರಕ ಶಕ್ತಿಯನ್ನು ಒದಗಿಸಿಕೊಡುವ ದೇವರಾಗಿದ್ದಾರೆ. ಮಲ್ಲಿಗೆ ಹಾಗೂ ಗುಲಾಬಿ ಮಿಶ್ರಣದ ತೈಲವನ್ನು ಈ ಭಾಗದಲ್ಲಿ ಶಕ್ತಿ ಸಕ್ರಿಯಗೊಳಿಸಲು ಬಳಸಬಹುದಾಗಿದೆ.
ಈ ವಲಯವು ಸ್ಪೂರ್ತಿದಾಯಕ ಶಕ್ತಿಯನ್ನು ಹೊಂದಿದೆ ಈ ಜಾಗವನ್ನು ಸಕ್ರಿಯಗೊಳಿಸುವುದರಿಂದ ಜೀವನದಲ್ಲಿ ಉತ್ತಮ ಲಾಭ ಮತ್ತು ಪ್ರಯೋಜನಗಳ ಮೂಲಕ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ